ಮತದಾನ ಪ್ರಕ್ರಿಯೆಯಲ್ಲಿ ಎಚ್ಚೆತ್ತುಕೊಳ್ಳದೇ, ಜಾಗೃತಿವಹಿಸದೇ, ರಾಜಕಾರಣಿಗಳ ಬಗ್ಗೆ ಪೂರ್ವಾಪರ ಯೋಚನೆ ಮಾಡದೇ ವೋಟ್ ಹಾಕಬಾರದು. ಚುನಾವಣೆಯಲ್ಲಿ ಸ್ಪರ್ಧಿಸಲು ನಿಂತ ವ್ಯಕ್ತಿಯ ಸಾಧನೆಗಳೇನು, ವೈಫಲ್ಯಗಳೇನು ಎಂಬುದರ ಬಗ್ಗೆ ಯೋಚಿಸಲೇಬೇಕು. ಜನರ ಸಮಸ್ಯೆಗಳನ್ನು ಪರಿಹರಿಸುವ, ದೇಶ ಮುನ್ನಡೆಸಿಕೊಂಡು ಹೋಗುವ ನಾಯಕನಿಗೆ ನಿಮ್ಮ ಮತ ಹಾಕಿ. ಭವಿಷ್ಯದ ಭಾರತ ನಿಮ್ಮ ಕೈಯಲ್ಲಿದೆ.