ವಿಶ್ವವಿದ್ಯಾಲಯದ ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ವಜುಭಾಯಿ ವಾಲಾ ಅವರ ನಿರ್ದೇಶನದಂತೆ ಕ್ಯಾಮೆರಾ ಅಳವಡಿಸಲು ವಿಟಿಯು ಮುಂದಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆ, ನಕಲು ಯತ್ನ ಸೇರಿದಂತೆ ಹಲವು ಆರೋಪಗಳು ಇತ್ತೀಚೆಗೆ ಪರೀಕ್ಷೆ ವೇಳೆ ಕೇಳಿಬಂದಿದ್ದವು. ಇವುಗಳನ್ನು ತಡೆಗಟ್ಟಲು ವಿಟಿಯು, ಕ್ಯಾಮೆರಾ ಮೊರೆಹೋಗಿದೆ.