ಹಿಡಕಲ್ ಜಲಾಶಯದಲ್ಲಿ ಸದ್ಯಕ್ಕೆ 4 ಟಿಎಂಸಿ ಅಡಿ ನೀರಿದೆ. ಜುಲೈ ಅಂತ್ಯದವರೆಗೆ ಬೆಳಗಾವಿ, ಹುಕ್ಕೇರಿ, ಸಂಕೇಶ್ವರ ಹಾಗೂ ಇತರ ಹಳ್ಳಿಗಳಿಗೆ ಕುಡಿಯುವುದಕ್ಕಾಗಿ 1 ಟಿಎಂಸಿ ಅಡಿ ನೀರು ಬೇಕು. ಇದೇ ಮೇ 24 ಕ್ಕೆ ಬಾಗಲಕೋಟೆಗೆ 2 ಟಿಎಂಸಿ ಅಡಿ ಬಿಡಲು ಈಗಾಗಲೇ ನಿರ್ಧಾರ ಕೈಕೊಳ್ಳಲಾಗಿದೆ. ಅಂದರೆ ನೀರಿನ ಸಂಗ್ರಹ 1 ಟಿಎಂಸಿ ಅಡಿಗೆ ಇಳಿಯಲಿದೆ. ಡೆಡ್ ಸ್ಟೋರೇಜ್ 2 ಟಿಎಂಸಿ ಅಡಿ ನೀರಿದೆ. ಚಿಕ್ಕೋಡಿ, ಅಥಣಿ, ರಾಯಬಾಗ ಹಾಗೂ ಜಮಖಂಡಿ ತಾಲ್ಲೂಕುಗಳ ಕೃಷ್ಣಾ ತೀರದ ಜನತೆಯ ನೀರಿನ ದಾಹ ತಣಿಸಲು 1 ಟಿಎಂಸಿ ಅಡಿ ನೀರು ಸಾಕಾಗುತ್ತದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.