ಇಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ನವರು ಸರಿ ಇದ್ದಿದ್ದರೆ ಇದ್ಯಾಕೆ ಆಗುತ್ತಿತ್ತು. ಅವರು ತೋಡಿದ ಗುಂಡಿಯಲ್ಲಿ ಅವರೇ ಬಿದ್ದಿದ್ದಾರೆ. ಹೀಗಿರುವಾಗ ಯಾರ ಮೇಲೆ ಆಡಿಯೊ ಮಾಡುತ್ತಾರೆ. ಅನರ್ಹರಿಗೂ ನಮಗೂ ಏನು ಸಂಬಂಧವಿದೆ. 17 ಜನ ನಮ್ಮವರಾ? 14 ಮಂದಿ ನಿಮ್ಮವರೇ (ಕಾಂಗ್ರೆಸ್ನವರು). ಸಿದ್ದರಾಮಯ್ಯ ಫೋಟೊ ಹಾಕಿಕೊಂಡು ಗೆದ್ದವರೇ. ಅವರ್ಯಾಕೆ ಓಡಿ ಹೋದರು. ಶಾಸಕರು ಅತೃಪ್ತರಾದಾಗಲು ಕಾರಣರಾರು. ಸಿದ್ದರಾಮಯ್ಯ ಅವರೇ ಅದಕ್ಕೂ ಕಾರಣ. ಕುಮಾರಸ್ವಾಮಿ ರಾಜೀನಾಮೆ ಕೊಟ್ಟಾಗ ಯಾರಾದರೂ ಜನ ಬೀದಿಗಿಳಿದು ಹೋರಾಡಿದರೇ?’ ಎಂದು ಕೇಳಿದರು.