ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲುವಿನ ಬರಹ

Last Updated 22 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

‘ನಾನು ಎಷ್ಟೋ ಸಿನಿಮಾಗಳ ಸಕ್ಸೆಸ್‌ ಮೀಟ್‌ ಮಾಡಿದ್ದೇನೆ. ಆದರೆ ಈ ಸಕ್ಸೆಸ್‌ ಮೀಟ್‌ ನನ್ನ ಹೃದಯಕ್ಕೆ ತುಂಬ ಹತ್ತಿರವಾದದ್ದು. ಯಾಕೆಂದರೆ ಈ ಚಿತ್ರದ ಮೂಲಕ ನಾನು ನನ್ನ ಮಗಳನ್ನು ನಟಿಯಾಗಿ ಚಿತ್ರರಂಗಕ್ಕೆ ಪರಿಚಯಿಸಿದ್ದೇನೆ’ ಅರ್ಜುನ್‌ ಸರ್ಜಾ ಕೊಂಚ ಭಾವುಕರಾಗಿಯೇ ಮಾತಾಡುತ್ತಿದ್ದರು. ಅದು ‘ಪ್ರೇಮ ಬರಹ’ ಚಿತ್ರದ ಸಕ್ಸೆಸ್‌ ಮೀಟ್‌.

ಚಿತ್ರದ ಯಶಸ್ಸನ್ನು ಮಾಧ್ಯಮದವರ ಎದುರು ಹಂಚಿಕೊಳ್ಳಲು ಹೊರಟ ಅರ್ಜುನ್‌, ಈ ಚಿತ್ರಕ್ಕೂ ತಮಗೂ ಇರುವ ವಿಶೇಷ ಸಂಬಂಧದ ಕುರಿತಾಗಿಯೇ ಮಾತನಾಡುತ್ತ ಹೋದರು. ‘ವ್ಯಾವಹಾರಿಕವಾಗಿ ಇದೊಂದು ಹಿಟ್‌ ಸಿನಿಮಾ. ಆದರೆ ನನ್ನ ಮಟ್ಟಿಗೆ ಇದು ಸೂಪರ್‌ ಡೂಪರ್‌ ಹಿಟ್‌. ಯಾಕೆಂದರೆ ಐಶ್ವರ್ಯಾಳನ್ನು ನನ್ನ ಮಗಳು ಎಂದಷ್ಟೇ ಅಲ್ಲದೇ ಓರ್ವ ಒಳ್ಳೆಯ ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಹೆಮ್ಮೆ ನನಗಿದೆ’ ಎಂದರು.

‘ನಾನು ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ಆದರೆ ಚಿತ್ರಕಥೆಯನ್ನು ಇಷ್ಟು ಆಸ್ಥೆಯಿಂದ ರೂಪಿಸಿ, ಇಷ್ಟು ನಿಖರವಾಗಿ ಚಿತ್ರವನ್ನು ಮಾಡುವುದನ್ನು ನೋಡಿರುವುದು ‘ಪ್ರೇಮಬರಹ’ದಲ್ಲಿಯೇ. ಕಥೆ ಚೆನ್ನಾಗಿದ್ದರೆ ಖಂಡಿತ ಸಿನಿಮಾ ಗೆಲ್ಲುತ್ತದೆ ಎಂಬುದಕ್ಕೆ ಇದು ಉದಾಹರಣೆ’ ಎಂದರು ಚಿತ್ರದಲ್ಲಿ ನಟಿಸಿರುವ ಹಿರಿಯ ಕಲಾವಿದ ಕೆ. ಮಂದಣ್ಣ. ಅರ್ಜುನ್‌ ಅವರು ಮಂದಣ್ಣ ಅವರ ಪ್ರತಿಭೆಯನ್ನು ನೋಡಿಯೇ ಅವರಿಗಾಗಿ ಈ ಚಿತ್ರದಲ್ಲಿ ಪಾತ್ರವನ್ನು ಸೃಷ್ಟಿಸಿದ್ದಾರಂತೆ.

ಮೊದಲ ಎರಡು ದಿನಗಳು ಜನರು ಕಡಿಮೆ ಇದ್ದರೂ ಮೂರನೇ ದಿನದಿಂದ ಎಲ್ಲೆಡೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆಯಂತೆ.

ಚಿತ್ರದ ನಾಯಕ ಚಂದನ್‌ ಅವರನ್ನು ನೋಡಿದ ಅವರ ಸ್ನೇಹಿತರೆಲ್ಲ ‘ನಿನ್ನ ಹಳೆಯ ಸಿನಿಮಾಗಳಿಗಿಂತ ನಟನೆಯಲ್ಲಿ ನೂರು ಪಟ್ಟು ಚೆನ್ನಾಗಿದೆ’ ಎಂದು ಹೇಳುತ್ತಿದ್ದಾರಂತೆ. ಈ ಎಲ್ಲ ಶ್ರೇಯವನ್ನು ಅವರು ಅರ್ಜುನ್‌ ಸರ್ಜಾ ಅವರ ಹೆಗಲಿಗೇ ವರ್ಗಾಯಿಸಿದರು.

‘ಈ ಚಿತ್ರದ ಯಶಸ್ಸಿನ ಹಿಂದೆ ಹಲವರ ಶ್ರಮವಿದೆ. ಕರ್ನಾಟಕದ ಜನರು ತುಂಬ ಅದ್ಭುತವಾಗಿ ನನ್ನನ್ನು ಸ್ವಾಗತಿಸಿದ್ದಾರೆ. ನನ್ನೊಳಗಿನ ನಟಿಯನ್ನು ಗುರ್ತಿಸಿದ್ದು ತಂದೆ ಅರ್ಜುನ್ ಸರ್ಜಾ. ಅವರಿಗೂ ನಾನು ಧನ್ಯವಾದ ಹೇಳಲೇಬೇಕು’ ಎಂದರು ಐಶ್ವರ್ಯಾ ಅರ್ಜುನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT