‘ವಧು– ವರರಿಗೆ ವಸ್ತ್ರ, 8 ಗ್ರಾಂ ಚಿನ್ನದ ಮಾಂಗಲ್ಯ ಹಾಗೂ ಆರ್ಥಿಕ ಸಹಾಯ ಮಾಡಲಾಗುವುದು. ಇದರಿಂದ ಬಡವರಿಗೆ ಸಹಕಾರಿಯಾಗಲಿದೆ. ಧಾರ್ಮಿಕ ಪರಿಷತ್, ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಗಳ ಮೂಲಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗುವುದು. ಸಂಘ ಸಂಸ್ಥೆಗಳು, ದಾನಿಗಳು,ಕೈಗಾರಿಕೋದ್ಯಮಿಗಳ ಜತೆಗೆ ಚರ್ಚಿಸಲಾಗುವುದು’ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.