ಮಂಗಳೂರು– ಸೋಲಾಪುರ ನಡುವಿನ ಈ ಹೆದ್ದಾರಿಯು ಶಿವಮೊಗ್ಗ, ತೀರ್ಥಹಳ್ಳಿ, ಹೊಸಪೇಟೆ ಮೂಲಕ ಹಾದು ಹೋಗುತ್ತದೆ. ಇದನ್ನು ನಾಲ್ಕು ಪಥಗಳ ರಸ್ತೆಯನ್ನಾಗಿ ಮಾರ್ಪಡಿಸಬೇಕು. ರಾಷ್ಟ್ರೀಯ ಹೆದ್ದಾರಿ ಎಂಬ ಹಣೆ ಪಟ್ಟಿ ಗಿಟ್ಟಿಸಿಕೊಂಡರೂ ಅತ್ಯಂತ ಕಿರಿಯದಾದ ಈ ರಸ್ತೆಯಲ್ಲಿ ಅಸಂಖ್ಯಾತ ಅಪಘಾತಗಳಾಗಿ ಸಾಕಷ್ಟು ಜನ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅವರು ಸರ್ಕಾರದ ಗಮನ ಸೆಳೆದರು.