ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಉಂಟಾದ ಅತಿವೃಷ್ಟಿ ಹಾಗೂ ಪ್ರವಾಹದಿಂದಾಗಿ ಮುಂಗಾರು ಜೋಳದ ಇಳುವರಿ ಗಣನೀಯವಾಗಿ ಕುಸಿದಿದೆ. ಹೀಗಾಗಿ, ಕಡಿಮೆ ಜೋಳ ಬೆಳೆಯುವ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಬೇಡಿಕೆ ಹೆಚ್ಚಿದೆ. ಕಲಬುರ್ಗಿ ಎಪಿಎಂಸಿಗೆ ಪ್ರತಿ ವರ್ಷ ವಿಜಯಪುರದ ಜೋಳವೇ ಆಧಾರ. ಆದರೆ, ಮಹಾರಾಷ್ಟ್ರದಲ್ಲೂ ಬೇಡಿಕೆ ಹೆಚ್ಚಿದ್ದರಿಂದ ಹೆಚ್ಚು ರೈತರು ಹಾಗೂ ಸಗಟು ವ್ಯಾಪಾರಿಗಳು ಅಲ್ಲಿಗೆ ಸರಬರಾಜು ಮಾಡುತ್ತಿದ್ದಾರೆ. ಕಾರಣ, ಮುಂದಿನ ವಾರ ಪ್ರತಿ ಕ್ವಿಂಟಲ್ಗೆ ದರ ಇನ್ನೂ ₹ 1ಸಾವಿರವರೆಗೆ ಏರಿಕೆ ಆಗಬಹುದು ಎನ್ನುತ್ತಾರೆ ವರ್ತಕರು.