‘ನಮ್ಮ ನೆರೆ ರಾಷ್ಟ್ರವಾಗಿ, ಪಾಕಿಸ್ತಾನದ ಮೇಲೆ ಮೊದಲು ದಾಳಿ ನಡೆಸಲು ನಾವು ಇಚ್ಛಿಸುವುದಿಲ್ಲ. ನೆರೆ ರಾಷ್ಟ್ರದ ಜತೆ ಶಾಂತಿ ಮತ್ತು ಸಾಮರಸ್ಯದಿಂದ ಇರಲು ನಾವು ಬಯಸುತ್ತೇವೆ. ಆದರೆ, ದುರದೃಷ್ಟವಶಾತ್ ಜಮ್ಮು ಮತ್ತು ಕಾಶ್ಮೀರದಲ್ಲಿ ಗಲಭೆ ಸೃಷ್ಟಿಸಲು ಮತ್ತು ಭಾರತೀಯ ಪಡೆಗಳ ಮೇಲೆ ದಾಳಿ ನಡೆಸಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ’ ಎಂದು ರಾಜನಾಥ್ ಹೇಳಿದರು.