‘ಈ ಹಿಂದಿನ ಸರ್ಕಾರ ಐರಾವತ ಯೋಜನೆಯಡಿ, ಕಾರು ಖರೀದಿಸುವ ಫಲಾನುಭವಿಗೆ ₹5 ಲಕ್ಷ ಆರ್ಥಿಕ ನೆರವು ನೀಡಿತ್ತು. ಆದರೆ, ಸಾರ್ವಜನಿಕರು ಕಾರುಗಳನ್ನು ಬಾಡಿಗೆ ಪಡೆಯದ್ದರಿಂದ ಫಲಾನುಭವಿಗಳು ಬ್ಯಾಂಕ್ ಸಾಲ ಮರುಪಾವತಿಸಲು ಪರದಾಡುವಂತಾಗಿದೆ. ಹೀಗಾಗಿ, ಮಿನಿಗೂಡ್ಸ್ ಮತ್ತು ಕ್ರೂಸರ್ ವಾಹನಗಳಿಗೆ ನೆರವು ನೀಡಲು ತೀರ್ಮಾನಿಸಲಾಗಿದ್ದು, ಮುಂಬರುವ ಬಜೆಟ್ನಲ್ಲಿ ಈ ಯೋಜನೆ ಜಾರಿಗೆ ತರಲಾಗುವುದು’ ಎಂದು ತಿಳಿಸಿದರು.