ಅತೃಪ್ತರು ಸರ್ಕಾರ ಬೆಂಬಲಿಸಿದರೆ ರೇವಣ್ಣ ರಾಜೀನಾಮೆಗೆ ಪ್ರಯತ್ನಿಸುವೆ

ಹೊಳೆನರಸೀಪುರ: ‘ಅತೃಪ್ತ ಶಾಸಕರು ಹಿಂದಿರುಗಿ ಬಂದು ಮೈತ್ರಿ ಸರ್ಕಾರವನ್ನು ಉಳಿಸುವುದಾದರೆ ಎಚ್.ಡಿ.ರೇವಣ್ಣ ಅವರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಿಸಲು ಪ್ರಯತ್ನಿಸುವೆ’ ಎಂದು ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ತಿಳಿಸಿದರು.
ತಾಲ್ಲೂಕಿನ ಹಳ್ಳಿಮೈಸೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಸರ್ಕಾರದ ಈ ಪರಿಸ್ಥಿತಿಗೆ ರೇವಣ್ಣ ಒಬ್ಬರೇ ಕಾರಣ ಅಲ್ಲ. ಉತ್ಸಾಹದಿಂದ ಕೆಲಸ ಮಾಡುವ ಸಮಯದಲ್ಲಿ ಕೆಲ ತಪ್ಪುಗಳು ಆಗಿರಬಹುದು. ಅವರೇ ಕಾರಣ ಎಂದು ಶಾಸಕರು ಭಾವಿಸಿದ್ದರೆ ರೇವಣ್ಣ ಅವರಿಂದ ರಾಜೀನಾಮೆ ಕೊಡಿಸಲು ನಾನು ಯತ್ನಿಸುತ್ತೇನೆ’ ಎಂದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.