‘17 ಶಾಸಕರು ಮೈತ್ರಿ ಸರ್ಕಾರ ಪತನಕ್ಕಾಗಿ ಕೆಲಸ ಮಾಡಿದ್ದಾರೆ. ಪರಿಣಾಮ, ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿರುವ ಎಚ್.ಡಿ. ಕುಮಾರಸ್ವಾಮಿ ಸಹಜವಾಗಿಯೇ ಅಸಮಾಧಾನಗೊಂಡು ಅನರ್ಹ ಶಾಸಕರನ್ನು ಸೋಲಿಸುವ ಕೆಲಸಕ್ಕೆ ಮುಂದಾಗಿರಬಹುದು. ಆದರೆ, ಅಥಣಿಯಲ್ಲಿ ಕಾರ್ಯಕರ್ತರು ನನ್ನ ಮಾತು ಮೀರುವುದಿಲ್ಲ. ಎಲ್ಲರನ್ನೂ ಕರೆದು ಮಾತನಾಡಿದ್ದೇನೆ. ಕೆಲಸ ಹಂಚಿದ್ದೇನೆ’ ಎಂದು ತಿಳಿಸಿದರು.