ತುಮಕೂರು: ‘ದೇಶದಲ್ಲಿ ಎಲ್ಲೇ ಸೇನೆಯ ಕಾರ್ಯಾಚರಣೆ ನಡೆದರೂ ಕಾಶ್ಮೀರದಲ್ಲೇ ಆಯಿ ತೇನೊ ಅನ್ನಿಸುತ್ತದೆ. ಯಾರೋ ಸೈನಿಕ ಹುತಾತ್ಮನಾದರೂ ಕಣ್ಣೀರು ಹರಿಯುತ್ತದೆ. ಮಗ ದೇಶ ಸೇವೆಗಾಗಿ ಹೊರಟು ನಿಂತಾಗ ಇದ್ದ ಆತಂಕ ಇನ್ನೂ ದೂರವಾಗಿಲ್ಲ. ಪ್ರತಿ ದಿನವೂ ಆತನ ಫೋನ್ಗಾಗಿ ಕಾಯುತ್ತಿರುತ್ತದೆ ಈ ಮನ’ ಎಂದು ಭಾವುಕರಾದರು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿರುವ ತುಮಕೂರಿನ ನಾಯಕ್ ಎಂ.ಸಾದಿಕ್ ಅವರ ತಾಯಿ ಸಿರಾಜುನ್ನೀಸ.