‘ಕುಸ್ತಿಯಲ್ಲಿ ಭಾಗವಹಿಸಲು ರಾಜ್ಯದ ಪಟುಗಳಿಗೆ ಮುಕ್ತ ಅವಕಾಶವಿದೆ. ಫೆ.7ರಂದು ಹೆಸರು ನೋಂದಾಯಿಸಿಕೊಂಡು ಅಖಾಡಾಕ್ಕೆ ಇಳಿಯಬಹುದು. 14 ವರ್ಷದೊಳಗಿನ ಬಾಲಕ, ಬಾಲಕಿಯರಿಗೆ ‘ಬಾಲಕೇಸರಿ’, 17 ವರ್ಷದೊಳಗಿನ ಬಾಲಕರಿಗೆ ‘ಕರ್ನಾಟಕ ಕಿಶೋರ’, ಬಾಲಕಿಯರಿಗೆ ‘ಕರ್ನಾಟಕ ಕಿಶೋರಿ’, 17 ವರ್ಷ ಮೇಲ್ಪಟ್ಟ ಯುವಕರಿಗೆ ‘ಕರ್ನಾಟಕ ಕೇಸರಿ’, ಯುವತಿಯರಿಗೆ ‘ಮಹಿಳಾ ಕರ್ನಾಟಕ ಕೇಸರಿ’ ಪ್ರಶಸ್ತಿ ಹಾಗೂ ನಗದು ನೀಡಲಾಗುವುದು. ಒಟ್ಟು ಬಹುಮಾನದ ಮೊತ್ತ ₹ 80 ಲಕ್ಷವಾಗಲಿದೆ’ ಎಂದು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಉಪನಿರ್ದೇಶಕ ಸೀಬಿರಂಗಯ್ಯ ಹೇಳಿದರು.