ವಿಜಯನಗರ ಕ್ಷೇತ್ರದ ಉಪಚುನಾವಣೆ ನಿಮಿತ್ತ ಸೋಮವಾರ ಸಂಜೆ ನಗರದಲ್ಲಿ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ನನ್ನ ಪ್ರಾಣ ಕೊಟ್ಟಾದರೂ ಎಲ್ಲಾ ಅನರ್ಹ ಶಾಸಕರನ್ನು ಗೆಲ್ಲಿಸಿ, ಉಳಿಸಿಕೊಳ್ಳುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ನೆರೆಯಿಂದ ಸಾಕಷ್ಟು ಜನ ನೋವು ಅನುಭವಿಸುತ್ತಿದ್ದರೂ ಅವರ ಬಗ್ಗೆ ಒಂದು ದಿನವೂ ಈ ರೀತಿಯ ಕನಿಕರದ ಮಾತುಗಳನ್ನು ಆಡಿಲ್ಲ. ಅವರು ರಾಜ್ಯದ ಆರುವರೆ ಕೋಟಿ ಜನರ ಮುಖ್ಯಮಂತ್ರಿನಾ ಅಥವಾ ಅನರ್ಹರಿಗಷ್ಟೇನಾ ಎಂಬುದನ್ನು ತಿಳಿಸಬೇಕು’ ಎಂದರು.