‘ಕೆಲವು ದಿನಗಳಿಂದ ಈ ಕೆರೆ ಬತ್ತಿದೆ. ಆದರೆ, ನೂರಾರು ಸಂಖ್ಯೆಯಲ್ಲಿರುವ ಜಿಂಕೆ, ಮಂಗ, ಅಪರೂಪದ ಮುಳ್ಳುಹಂದಿ ಹಾಗೂ ನೂರಾರುಪಕ್ಷಿಗಳು ನೀರಿಗಾಗಿ ಪರಿತಪಿಸುತ್ತಿವೆ. ವನ್ಯಪ್ರಾಣಿಗಳು ನೀರಿಗೆ ಪರದಾಡುತ್ತಿರುವ ದೃಶ್ಯ ಮನಕಲಕುವಂತಿರುತ್ತದೆ. ಅವುಗಳಿಗೆನೀರಿನ ವ್ಯವಸ್ಥೆ ಮಾಡಲು ನಾಲ್ಕೈದು ಜನರು ನಿರ್ಧರಿಸಿದ್ದೆವು. ಅದರಂತೆ ತೋಟದಲ್ಲಿ ಕೆಲಸ ಮಾಡುವ ಬಸಣ್ಣ, ರೈತ ಸೋಮು ಉಗ್ಗಿನಕೇರಿ ಹಾಗೂ ನಾನು ಸೇರಿ ಟ್ಯಾಂಕರ್ ಮೂಲಕ ನೀರು ಹರಿಸಿದೆವು’ಎನ್ನುತ್ತಾರೆ ಯುವ ರೈತ ವಡಗಟ್ಟಾದ ಕೆ.ರಾಜು.