ನವದೆಹಲಿ: ಭಾರತೀಯ ಯುವ ಕಾಂಗ್ರೆಸ್ನ ಉಪಾಧ್ಯಕ್ಷರಾಗಿದ್ದ ಶ್ರೀನಿವಾಸ್ ಬಿ.ವಿ. ಅವರಿಗೆ ಸಂಘಟನೆಯ ಮಧ್ಯಂತರ ಅಧ್ಯಕ್ಷರಾಗಿ ಬಡ್ತಿ ನೀಡಲಾಗಿದೆ.
ಶ್ರೀನಿವಾಸ್ ಅವರು ಭದ್ರಾವತಿಯವರು. ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರಿಗೆ 2010ರಲ್ಲಿ ಮಸಿ ಬಳಿದ ಬಳಿಕ ಅವರು ಸುದ್ದಿಯಾಗಿದ್ದರು.
ಕೇಶವ ಚಂದ್ ಯಾದವ್ ಅವರು ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಆದರೆ, ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ ಅವರು ಲೋಕಸಭಾ ಚುನಾವಣೆಯ ಸೋಲಿನ ಹೊಣೆ ಹೊತ್ತು ರಾಜೀನಾಮೆ ನೀಡಿದ ಬಳಿಕ ಯಾದವ್ ಅವರೂ ಹುದ್ದೆ ತ್ಯಜಿಸಿದ್ದರು.