ಗ್ರಾಮ ಸಮೀಪದ ಸಂಗೊಳ್ಳಿ–ಜಿಡ್ಡಿ ಹಳ್ಳದ ಬಳಿಯ ತಮ್ಮ ಹೊಲಕ್ಕೆ ಮೇವು ತರಲು ಶನಿವಾರ ಹೋಗಿದ್ದರು. ಸಂಜೆಯಾದರೂ ವಾಪಸಾಗಿರಲಿಲ್ಲ. ನಾಪತ್ತೆಯಾದ ಬಗ್ಗೆ ಪೋಷಕರು ದೊಡವಾಡ ಠಾಣೆಗೆ ದೂರು ನೀಡಿದ್ದರು. ಸೋಮವಾರ ಬೆಳಿಗ್ಗೆ ಯುವಕನ ಚಿಕ್ಕಪ್ಪ ಹಳ್ಳದಲ್ಲಿ ಗಿಡದಲ್ಲಿ ಶವವೊಂದು ಸಿಕ್ಕಿ ಹಾಕಿಕೊಂಡಿರುವುದನ್ನು ಗಮನಿಸಿ, ಮನೆಯವರಿಗೆ ಸುದ್ದಿ ತಿಳಿಸಿದ್ದಾರೆ. ದೌಡಾಯಿಸಿದ ತಂದೆ ಬಸಪ್ಪ ಅಳುತ್ತಲೇ ಶವವತ್ತು ಎತ್ತುಕೊಂಡು ಬಂದ ದೃಶ್ಯ, ಅಲ್ಲಿದ್ದವರ ಕಣ್ಣಾಲಿಗಳು ತುಂಬುವಂತೆ ಮಾಡಿದವು. ತಾಯಿ ಹಾಗೂ ಪೋಷಕರ ರೋದನೆ ಮುಗಿಲು ಮುಟ್ಟಿತು. ಇದು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿದೆ.