ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣದಲ್ಲಿ ಆರೋಪಿಯಾದ ಜೆಡಿಎಸ್ ಮುಖಂಡ ಹಾಗೂ ಮಾಜಿ ಶಾಸಕ ವೈ ಎಸ್. ವಿ ದತ್ತಾ ವಿರುದ್ಧ ಜನಪ್ರತಿನಿಧಿಗಳ ಕೋರ್ಟ್ ಜಾಮೀನು ರಹಿತ ವಾರಂಟ್ ಹೊರಡಿಸಿದೆ.
ಚೆಕ್ ಬೌನ್ಸ್ ಪ್ರಕರಣದಲ್ಲಿ ದತ್ತಾ ಅವರಿಗೆ "ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯ" ಈ ಮೊದಲು ಸಮನ್ಸ್ ಜಾರಿಗೊಳಿಸಿದ್ದರೂ ವಿಚಾರಣೆಗೆ ದತ್ತಾ ಗೈರು ಹಾಜರಾಗಿದ್ದರು.
ಶನಿವಾರ ನಡೆದ ವಿಚಾರಣೆಗೂ ಅವರು ಹಾಜರಾಗದ ಕಾರಣ ಕೋರ್ಟ್ ನೊಟೀಸ್ ಜಾರಿಗೊಳಿಸಿತ್ತು.
ಪ್ರಕರಣವೇನು?:"ಬೇಲೂರಿನ ಆರ್. ಸುಬ್ರಹ್ಮಣ್ಯ ಅವರ ಬಳಿ ದತ್ತಾ ₹ 5 ಲಕ್ಷ ಪಡೆದಿದ್ದರು. ಅದರಲ್ಲಿ ₹ 2 ಲಕ್ಷ ಪಾವತಿಸಿದ್ದಾರೆ. ಉಳಿದ ಮೊತ್ತಕ್ಕೆ ಚೆಕ್ ನೀಡಿದ್ದಾರೆ. ಆದರೆ ಅದು ನಗದು ಆಗಿಲ್ಲ" ಎಂಬುದು ಆರೋಪ.
ಕಡೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರೂ ಆದ ದತ್ತಾ ಸದ್ಯ ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದಾರೆ.