ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪನ್ಯಾಸಕಿಗೆ ಚೂರಿ ಇರಿತ

Last Updated 9 ಅಕ್ಟೋಬರ್ 2018, 18:45 IST
ಅಕ್ಷರ ಗಾತ್ರ

ಕೂಡ್ಲಿಗಿ: ಮಹಿಳೆಯೊಬ್ಬರೊಂದಿಗೆ ಹೊಂದಿದ್ದ ಅನೈತಿಕ ಸಂಬಂಧ ಬಹಿರಂಗಪಡಿಸಿದರು ಎಂಬ ಶಂಕೆಯಿಂದ ತಾಲ್ಲೂಕಿನ ಗುಡೇಕೋಟೆಯ ಜ್ಞಾನ ಸಮೃದ್ಧಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪ್ರಶಾಂತ್‌ ಅಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಸುಧಾರಾಣಿ ಅವರನ್ನು ಮಂಗಳವಾರ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾನೆ. ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.

ದಾವಣಗೆರೆ ಮೂಲದ ಸುಧಾರಾಣಿ ವೃತ್ತಿ ಸಲುವಾಗಿ ಐದು ವರ್ಷದಿಂದ ಅದೇ ಗ್ರಾಮದಲ್ಲಿ ವಾಸಿಸಿದ್ದಾರೆ.

‘ಶಿಕ್ಷಕರೊಬ್ಬರ ಪತ್ನಿಯೊಂದಿಗೆ ಆರೋಪಿಯು ಅನೈತಿಕ ಸಂಬಂಧ ಹೊಂದಿದ್ದ. ಅದುಬಹಿರಂಗಗೊಂಡ ನಂತರ ಗ್ರಾಮಸ್ಥರು ಆತನನ್ನು ತರಾಟೆಗೆ ತೆಗೆದುಕೊಂಡು ಬುದ್ಧಿವಾದ ಹೇಳಿದ್ದರು. ಆರು ತಿಂಗಳ ಕಾಲ ಗ್ರಾಮದಿಂದ ದೂರವಿದ್ದ’ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಮಂಗಳವಾರ ಗ್ರಾಮಕ್ಕೆ ಬಂದ ಆರೋಪಿಯು ಮಧ್ಯಾಹ್ನ ಕಾಲೇಜಿನಿಂದ ವಸತಿ ಗೃಹಕ್ಕೆ ಹೋಗುತ್ತಿದ್ದ ಉಪನ್ಯಾಸಕಿಯ ಹೊಟ್ಟೆ ಹಾಗೂ ಬೆನ್ನಿಗೆ ಚೂರಿಯಿಂದ ಇರಿದಿದ್ದಾನೆ. ಗಾಯಗೊಂಡ ಅವರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಕೂಡ್ಲಿಗಿ ಸಿಪಿಐ ನಹೀಂ ಆಹಮದ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT