ಅದರಲ್ಲೂ ಜನರ ಅಭ್ಯುದಯಕ್ಕೆ ನೇರ ಸಂಬಂಧ ಇರುವ ಶಿಕ್ಷಣ, ಜಲ ಸಂಪನ್ಮೂಲ, ಗ್ರಾಮೀಣಾಭಿವೃದ್ಧಿ ಹಾಗೂ ನಗರಾಭಿವೃದ್ಧಿ ಇಲಾಖೆಗಳೇ ಹಣ ಬಳಕೆಯಲ್ಲಿ ತುಂಬಾ ಹಿಂದೆ ಬಿದ್ದಿವೆ. ಇದರಿಂದ ಯೋಜನೆಗಳ ಅನುಷ್ಠಾನ ಕೂಡ ಕುಂಠಿತಗೊಂಡಿದೆ. ವಿಧಾನ ಮಂಡಲದಲ್ಲಿ ಶುಕ್ರವಾರ ಮಂಡಿಸಿದ ‘ರಾಜ್ಯ ಸರ್ಕಾರದ ಹಣಕಾಸಿನ ವ್ಯವಹಾರಗಳು’ ಎಂಬ ‘ಸಿಎಜಿ’ ವರದಿಯಲ್ಲಿ ಈ ಲೋಪವನ್ನು ಎತ್ತಿ ತೋರಲಾಗಿದೆ.