‘₹4 ಸಾವಿರ ಹೆಚ್ಚುವರಿ ನೆರವು ಪ್ರಕಟಿಸಲಾಗಿದ್ದು, ಈಗ ₹2 ಸಾವಿರ ನೀಡುತ್ತಿದ್ದು, ಹಣಕಾಸಿನ ಪರಿಸ್ಥಿತಿ ನೋಡಿಕೊಂಡು ಮುಂದಿನ ತಿಂಗಳು ಉಳಿದ ₹2 ಸಾವಿರ ನೀಡಲಾಗುವುದು. ಈ ಯೋಜನೆಯಲ್ಲಿ ಕೇಂದ್ರ ಸರ್ಕಾರಪ್ರತಿ ರೈತರಿಗೆ ₹6 ಸಾವಿರ ನೀಡುತ್ತಿದ್ದು, ರಾಜ್ಯದ ಪಾಲು ಸೇರಿದರೆ ಒಟ್ಟು ₹10 ಸಾವಿರ ನೆರವು ಸಿಕ್ಕಂತಾಗುತ್ತದೆ. ಇಂಥ ಸಂಕಷ್ಟದ ಪರಿಸ್ಥಿತಿಯಲ್ಲಿಈ ಹಣ ನೆರವಿಗೆ ಬರಲಿದೆ ಎಂದರು.