‘ಆ್ಯಪ್ನಲ್ಲಿ ಪರಿಚಯವಾದ ಕೆಲವರು, ಕಾರು ಖರೀದಿಗಾಗಿ ಇಲ್ಲಿಗೆ ಬರುವಂತೆ ಫೋನ್ನಲ್ಲಿ ತಿಳಿಸಿದ್ದರು. ಅವರನ್ನು ನಂಬಿ ಸಹೋದರ ಮಹ್ಮದ್ ಯಾಸಿನ್ ಜೊತೆ ಶನಿವಾರ ಇಲ್ಲಿಗೆ ಬಂದಿದ್ದೆವು. ಇಂಡಿಕಾ ಕಾರ್ನಲ್ಲಿ ಬಂದ ವ್ಯಕ್ತಿಯೊಬ್ಬರು ಬಾಮನವಾಡಿ ಬಳಿಯ ಶಾಂತಾಯಿ ವೃದ್ಧಾಶ್ರಮ ಸಮೀಪದ ಮಾವಿನ ತೋಟದ ಬಳಿಗೆ ಕರೆದೊಯ್ದರು. ಅಲ್ಲಿದ್ದ ನಾಲ್ವರು ಚಾಕು ತೋರಿಸಿ ಬೆದರಿಸಿ, ನಮ್ಮ ಬಳಿ ಇದ್ದ ನಗದು, 2 ಮೊಬೈಲ್ ಫೋನ್ಗಳು, ವಾಚ್, ಬೆಳ್ಳಿ ಉಂಗುರ, ಎಪಿಕ್ ಕಾರ್ಡ್, ಪ್ಯಾನ್ ಕಾರ್ಡ್ ಕಿತ್ತುಕೊಂಡು ಪರಾರಿಯಾದರು’ ಎಂದು ಮಹ್ಮದ್ ಶಾಬಾಷ್ ಅಹ್ಮದ್ ದೂರು ನೀಡಿದ್ದಾರೆ.