ಕೊರೊನಾ ವಿರುದ್ಧ ತನ್ನ ಆಡಳಿತ ಯಾವ ರೀತಿಯಲ್ಲಿ ಹೋರಾಡುತ್ತಿದೆ ಎಂಬ ಬಗ್ಗೆ ಮಾಹಿತಿ ನೀಡುತ್ತಾ ಈ ವಿಚಾರ ತಿಳಿಸಿದ ಅವರು, ‘ಕಳೆದುಕೊಂಡ ಪ್ರತಿಯೊಂದು ಅಮೂಲ್ಯ ಜೀವದ ಬಗ್ಗೆಯೂ ನಾವು ಸಂತಾಪ ವ್ಯಕ್ತಪಡಿಸುತ್ತೇವೆ. ನಾವು ಲಸಿಕೆಯನ್ನು ಅಭಿವೃದ್ಧಿಪಡಿಸಿ, ಕೊರೊನಾವನ್ನು ಓಡಿಸುತ್ತೇವೆ ಎಂದು ಮೃತಪಟ್ಟ ಪ್ರತಿಯೊಬ್ಬರ ಗೌರವಾರ್ಥವಾಗಿ ನಾವು ಪ್ರತಿಜ್ಞೆ ಮಾಡುತ್ತೇವೆ. ಲಸಿಕೆ ಕಂಡುಹಿಡಿಯುವ ದಿಕ್ಕಿನಲ್ಲಿ ನಾವು ಗಮನಾರ್ಹ ಸಾಧನೆ ಮಾಡುತ್ತಿದ್ದೇವೆ. ಜನರು ನಿರೀಕ್ಷಿಸಿರುವುದಕ್ಕಿಂತ ಮುಂಚಿತವಾಗಿಯೇ ಲಸಿಕೆ ಬಿಡುಗಡೆಯಾಗುವ ಸಾಧ್ಯತೆ ಇದೆ’ ಎಂದರು.