ಬೆತ್ತಲೆ ಮೆರವಣಿಗೆ: ಎಎಸ್ಐ, ಚಾಲಕ ಅಮಾನತು
ಕಬ್ಬೆಕಟ್ಟೆ ಶನೇಶ್ವರ ದೇವಾಲಯದ ಆವರಣದಲ್ಲಿ ನಡೆದ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ ಗುಂಡ್ಲುಪೇಟೆ ಪೊಲೀಸ್ ಠಾಣೆ ಎಎಸ್ಐ ಮತ್ತು ಹೈವೇ ಪಾಟ್ರೋಲ್ ಉಸ್ತುವಾರಿ ಸಿ.ರಾಜೇಂದ್ರ ಪ್ರಸಾದ್ ಮತ್ತು ವಾಹನ ಚಾಲಕ ಶ್ರಿನಿವಾಸ (ಎಎಸ್ಸಿ–111, ಡಿಎಆರ್) ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದ ಕುಮಾರ್ ಅವರು ಗುರುವಾರ ಆದೇಶ ಹೊರಡಿಸಿದ್ದಾರೆ.Last Updated 13 ಜೂನ್ 2019, 20:15 IST