ಮಗೆ ಕೆರೆ ಮಲಿನ: ಅಧಿಕಾರಿಗಳಿಗೆ ತರಾಟೆ
‘ಅಕ್ಕಪಕ್ಕದ ಬಡಾವಣೆಗಳ ಕೊಳಚೆ ನೀರು ಕೆರೆ ಸೇರುತ್ತಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಬಿಬಿಎಂಪಿ ಒಂದೊಂದು ವಿಭಾಗಕ್ಕೂ ಒಬ್ಬ ಪ್ರಧಾನ ಎಂಜಿನಿಯರ್ ಅನ್ನು ನೇಮಕ ಮಾಡಿದ್ದರೂ, ಕೆಲಸಗಳು ಸರಿಯಾಗಿ ಆಗುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರ್ಕಾರದ ಯೋಜನೆಗಳಿಗೆ ಕೆಟ್ಟ ಹೆಸರು ಬರುತ್ತಿದೆ. ದುರ್ವಾಸನೆ ಹೆಚ್ಚಾದ ಕಾರಣಕ್ಕೆ ಕೆರೆ ಅಂಗಳದಲ್ಲಿ ವಾಯುವಿಹಾರ ಮಾಡುತ್ತಿದ್ದವರ ಸಂಖ್ಯೆಯೂ ಕಡಿಮೆ ಆಗಿದೆ. ನೀವು ಮಾಡುವ ತಪ್ಪುಗಳಿಗೆ, ಜನ ನಮ್ಮನ್ನು ಪ್ರಶ್ನೆ ಮಾಡುತ್ತಾರೆ. ಅವರಿಗೆ ಏನೆಂದು ಉತ್ತರ ಕೊಡೋಣ’ ಎಂದು ಕೃಷ್ಣಪ್ಪ ಆಕ್ರೋಶ ವ್ಯಕ್ತಪಡಿಸಿದರು.Last Updated 19 ಜೂನ್ 2018, 19:30 IST