ಹಂಪಿಯಲ್ಲಿ ಸುರೇಂದ್ರ ತೀರ್ಥರ ಬೃಂದಾವನ ಪತ್ತೆ
’ಹಂಪಿಯ ವಿಜಯ ವಿಠ್ಠಲ ದೇವಸ್ಥಾನದ ಸಮೀಪದಲ್ಲಿ ಸುರೇಂದ್ರ ತೀರ್ಥರ ಮಠವಿದೆ. ಆದರೆ, ಸುರೇಂದ್ರ ತೀರ್ಥರ ಬೃಂದಾವನ ಎಲ್ಲಿದೆ ಎಂಬುದು ಇದುವರೆಗೂ ಪತ್ತೆಯಾಗಿರಲಿಲ್ಲ. ದೇವಸ್ಥಾನದ ಬಳಿ ಉತ್ಖನನ ಮಾಡುವಾಗ ಬೃಂದಾವನವೊಂದು ಕಂಡು ಬಂದಿದೆ ಎನ್ನುವ ವಿಚಾರ ಮಾಧ್ಯಮಗಳಿಂದ ಈಗಷ್ಟೇ ಗೊತ್ತಾಗಿದೆ. ಭಾನುವಾರ ಬೆಳಿಗ್ಗೆ ಹಂಪಿಗೆ ಹೋಗಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಶೀಲಿಸಲಾಗುವುದು’ ಎಂದು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ತಿಳಿಸಿದ್ದಾರೆ.Last Updated 13 ಅಕ್ಟೋಬರ್ 2018, 15:31 IST