ಉತ್ತರ ಕರ್ನಾಟಕ ಯರಗುಪ್ಪಿಯ ಹೆಜ್ಜೆ ಮೇಳ
ಉತ್ತರ ಕರ್ನಾಟಕ ಭಾಗದ ಹಲವೆಡೆ ಮೊಹರಂ ಆಚರಣೆಯನ್ನು ಹಿಂದೂ– ಮುಸ್ಲಿಮರು ಭಾವೈಕ್ಯದಿಂದ ಆಚರಿಸುತ್ತಾರೆ. ಯರಗುಪ್ಪಿಯ ಹೆಜ್ಜೆ ಮೇಳಕ್ಕೆ 30 ಸಾವಿರಕ್ಕೂ ಹೆಚ್ಚು ಜನರು ಸೇರುತ್ತಾರೆ. ಧಾರವಾಡ, ಗದಗ, ಹಾವೇರಿ, ಬೆಳಗಾವಿ, ಬಾಗಲಕೋಟೆ ಸೇರಿದಂತೆ ಸುತ್ತಲಿನ ಹತ್ತಾರು ಜಿಲ್ಲೆಗಳ 40ಕ್ಕೂ ಹೆಚ್ಚು ತಂಡಗಳು ಹೆಜ್ಜೆ ಮೇಳದಲ್ಲಿ ಭಾಗವಹಿಸುತ್ತವೆ. ಅವರ ಕುಣಿತ ನೋಡುವುದೇ ಬಹು ಅಂದ.Last Updated 9 ಸೆಪ್ಟೆಂಬರ್ 2019, 19:30 IST