ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೊಸ ಹುರುಪು, ಹಳೆ ಹೊಳಪು’

Last Updated 12 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆಲವು ಕಡೆಗಳಲ್ಲಿ ವಿವಿ ಪ್ಯಾಟ್‌, ಮತಯಂತ್ರದಲ್ಲಿ ತಾಂತ್ರಿಕ ದೋಷ ಹೊರತುಪಡಿಸಿ, ಶಾಂತಿಯುತ ಮತದಾನವಾಗಿದೆ.

ಬಿಸಿಲು, ಮಳೆಯ ಆತಂಕದಿಂದಲೋ ಏನೋ ಬೆಳಿಗ್ಗೆಯೇ ಜನರು ಮತಗಟ್ಟೆಗಳಲ್ಲಿ ಬಂದಿದ್ದರಿಂದ ದಟ್ಟಣೆ ತುಸು ಹೆಚ್ಚಾಗಿಯೇ ಇತ್ತು. ಮಧ್ಯಾಹ್ನದ ನಂತರ ಈ ಪ್ರಮಾಣ ಕುಗ್ಗುತ್ತಾ ಬಂದಿತು.

‘ಬೆಳಿಗ್ಗೆ 7 ಗಂಟೆಗೆ ಸರಿಯಾಗಿ ಮತದಾನ ಆರಂಭವಾಗಿದೆ. ಅಷ್ಟೊತ್ತಿಗಾಗಲೇ ಜನರ ಸಾಲು ಉದ್ದವಾಗಿತ್ತು. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಹೆಚ್ಚು ಮಂದಿ ಮತ ಚಲಾಯಿಸಲು ಬಂದಿದ್ದಾರೆ’ ಎಂದು ಪಕ್ಷವೊಂದರ ಏಜೆಂಟ್‌ ಹೇಳಿದರು.

ಹೊಸಕೋಟೆಯ ಮತಗಟ್ಟೆ ಸಂಖ್ಯೆ 23ಕ್ಕೆ ಕುಂಟುತ್ತಲೇ ಬಂದ ಚಿಕ್ಕರಳಗೆರೆ ಗ್ರಾಮದ 95 ವರ್ಷದ ಬಚ್ಚಪ್ಪ ಅವರಲ್ಲಿ ತಮ್ಮ ಹಕ್ಕನ್ನು ತಪ್ಪದೇ ಚಲಾಯಿಸಬೇಕು ಎಂಬ ಅರಿವು ಢಾಳವಾಗಿತ್ತು. ‘ಯುವಸಮುದಾಯ ಮತ ಚಲಾಯಿಸಲಿಲ್ಲ ಎಂದರೆ ನಾನೇನು ಮಾಡಲು ಆಗುವುದಿಲ್ಲವಲ್ಲ.
ಅರಿವು ಬರಬೇಕು’ ಎಂದರು.

ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 816 ಮತದಾನ ಕೇಂದ್ರಗಳಿದ್ದವು. ಇದರಲ್ಲಿ 246 ಅತಿಸೂಕ್ಷ್ಮ, 312 ಸೂಕ್ಷ್ಮ258 ಸಾಮಾನ್ಯ ಮತಗಟ್ಟೆಗಳು. ಅತಿ ಸೂಕ್ಷ್ಮ, ಸಾಮಾನ್ಯ ಮತದಾನ ಕೇಂದ್ರಗಳಲ್ಲಿ ಬಿಗಿ ಭದ್ರತೆ ವ್ಯವಸ್ಥೆ ಕಲ್ಪಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT