<p>ಬೆಂಗಳೂರು: ನಗರದ ಮಿದುಳು ತಜ್ಞರು, ಮನೋವೈದ್ಯರು ಮತ್ತು ನರವಿಜ್ಞಾನಿಗಳನ್ನು ಒಳಗೊಂಡ ತಂಡವೊಂದು ಮನೋವೈದ್ಯಕೀಯ ಅಸ್ವಸ್ಥತೆಗಳನ್ನು ವಿಶ್ಲೇಷಿಸಲು ‘ಕಾಮ್–ಬ್ರೈನ್’ ಡಿಜಿಟಲ್ ಮಾಹಿತಿ ಭಂಡಾರವನ್ನು ಅಭಿವೃದ್ಧಿ ಪಡಿಸಿದ್ದಾರೆ.</p>.<p>ಮಾನಸಿಕ ಅಸ್ವಸ್ಥತೆಗಳಿಂದ ಬಳಲುತ್ತಿರುವ ರೋಗಿಗಳ ಮಿದುಳಿನ ರಚನೆ ಮತ್ತು ಅದರ ಕಾರ್ಯಾಚರಣೆ ಬಗ್ಗೆ ಎಲ್ಲ ಮಾಹಿತಿಯನ್ನು ಬೃಹತ್ ಪ್ರಮಾಣದಲ್ಲಿ ಸಂಗ್ರಹಿಸುವ, ವ್ಯವಸ್ಥಿತವಾಗಿ ದಾಖಲಿಸುವ ಭಾರತದ ಮೊಟ್ಟಮೊದಲ ಪ್ರಯತ್ನ ಇದಾಗಿದೆ.</p>.<p>ರೋಹಿಣಿ ನಿಲೇಕಣಿ ಸೆಂಟರ್ ಫಾರ್ ಬ್ರೈನ್ ಆ್ಯಂಡ್ ಮೈಂಡ್ನ (ಸಿಬಿಎಂ) ಸಂಶೋಧಕರು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಹಾಗೂ ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರ (ಎನ್ಸಿಬಿಎಸ್)– ಟಿಐಎಫ್ಆರ್ ಸಹಯೋಗದಲ್ಲಿ ಹತ್ತು ವರ್ಷಗಳಿಂದ ಸಂಶೋಧನೆ ನಡೆಸಿ, ‘ಕಾಮ್-ಬ್ರೈನ್’ ಅಭಿವೃದ್ಧಿಪಡಿಸಿದ್ದಾರೆ. ನಗರದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಈ ಡಿಜಿಟಲ್ ಮಾಹಿತಿ ಭಂಡಾರ ಅನಾವರಣ ಮಾಡಿದ್ದಾರೆ.</p>.<p>‘ನರಮನೋವೈದ್ಯಕೀಯ ಅಸ್ವಸ್ಥತೆಗಳನ್ನು ಅಧ್ಯಯನ ಮಾಡುವ ಗುರಿ ಹೊಂದಿರುವ ಭಾರತದ ಯಾವುದೇ ವೈದ್ಯರು ಮತ್ತು ಸಂಶೋಧಕರು, ಈ ಬಹುಮಾದರಿ ಡಿಜಿಟಲ್ ಭಂಡಾರದ ನೆರವು ಪಡೆಯಬಹುದಾಗಿದೆ. ಇದರಿಂದಾಗಿ ರೋಗದ ಆಕ್ರಮಣ, ಪ್ರಗತಿ ಮತ್ತು ಅದಕ್ಕೆ ಸಂಬಂಧಿಸಿರುವ ಜೈವಿಕ ಬದಲಾವಣೆಗಳು ಹಾಗೂ ರೋಗದ ಲಕ್ಷಣಗಳ ನಡುವಿನ ಪರಸ್ಪರ ಸಂಬಂಧಗಳನ್ನು ನಿಖರವಾಗಿ ಅರ್ಥ ಮಾಡಿಕೊಳ್ಳಬಹುದು’ ಎಂದು ಸಿಬಿಎಂ ಸಂಶೋಧಕರು ತಿಳಿಸಿದರು.</p>.<p>‘ಕಾಮ್-ಬ್ರೈನ್ ಅಡಿ ನಡೆಸಿದ ಸಂಶೋಧನೆಗಳು ಮಾನಸಿಕ ಅಸ್ವಸ್ಥತೆಗಳ ಕುರಿತಾದ ತಿಳಿವಳಿಕೆಯನ್ನು ಅರ್ಥೈಸುವಲ್ಲಿ ಅಪಾರ ಸಾಮರ್ಥ್ಯವನ್ನು ಹೊಂದಿವೆ. ರೋಗ ನಿವಾರಣೆ ವಿಧಾನವನ್ನು ಗುರುತಿಸಲು ಮತ್ತು ವ್ಯಕ್ತಿಗತ ಚಿಕಿತ್ಸೆಗಳನ್ನು ಯೋಜಿಸುವಲ್ಲಿ ಸಹಾಯ ಮಾಡುತ್ತದೆ’ ಎಂದರು.</p>.<p>ಚಿಕಿತ್ಸೆಗೆ ಸಹಕಾರಿ: ‘ಕಾಮ್–ಬ್ರೈನ್ ಅಡಿ ಸಂಗ್ರಹಿಸಲಾದ ದತ್ತಾಂಶವು ಪರಿಣಾಮಕಾರಿ ಚಿಕಿತ್ಸೆಯ ಅಭಿವೃದ್ಧಿಗೆ ನಮಗೆ ಸಹಾಯ ಮಾಡುತ್ತದೆ’ ಎಂದು ಎನ್ಸಿಬಿಎಸ್ನ ನಿರ್ದೇಶಕ ಪ್ರೊ.ಎಲ್.ಎಸ್. ಶಶಿಧರ್ ಹೇಳಿದರು.</p>.<p>‘ಸಾಂಪ್ರದಾಯಿಕ ರೋಗನಿರ್ಣಯ ಚೌಕಟ್ಟುಗಳನ್ನು ಮೀರಿದ, ತೀವ್ರ ಮನೋವೈದ್ಯಕೀಯ ಕಾಯಿಲೆಗಳ ಜೈವಿಕ ಗುರುತುಗಳನ್ನು ಗುರುತಿಸುವುದು ಈ ಯೋಜನೆಯ ಪ್ರಾಥಮಿಕ ಗುರಿಯಾಗಿದೆ. ಇದರ ಜತೆಗೆ, ರೋಗದ ಮೂಲಭೂತ ಜೈವಿಕ ಕಾರ್ಯವಿಧಾನಗಳನ್ನು ಗುರುತಿಸಲು ನಾವು ಪ್ರಯತ್ನಿಸುತ್ತೇವೆ’ ಎಂದು ಸಿಬಿಎಂ– ನಿಮ್ಹಾನ್ಸ್ನ ಸಂಯೋಜಕರಾದ ಪ್ರೊ.ವೈ.ಸಿ. ಜನಾರ್ದನ ರೆಡ್ಡಿ ಮಾಹಿತಿ ನೀಡಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260401-4-302653491</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ನಗರದ ಮಿದುಳು ತಜ್ಞರು, ಮನೋವೈದ್ಯರು ಮತ್ತು ನರವಿಜ್ಞಾನಿಗಳನ್ನು ಒಳಗೊಂಡ ತಂಡವೊಂದು ಮನೋವೈದ್ಯಕೀಯ ಅಸ್ವಸ್ಥತೆಗಳನ್ನು ವಿಶ್ಲೇಷಿಸಲು ‘ಕಾಮ್–ಬ್ರೈನ್’ ಡಿಜಿಟಲ್ ಮಾಹಿತಿ ಭಂಡಾರವನ್ನು ಅಭಿವೃದ್ಧಿ ಪಡಿಸಿದ್ದಾರೆ.</p>.<p>ಮಾನಸಿಕ ಅಸ್ವಸ್ಥತೆಗಳಿಂದ ಬಳಲುತ್ತಿರುವ ರೋಗಿಗಳ ಮಿದುಳಿನ ರಚನೆ ಮತ್ತು ಅದರ ಕಾರ್ಯಾಚರಣೆ ಬಗ್ಗೆ ಎಲ್ಲ ಮಾಹಿತಿಯನ್ನು ಬೃಹತ್ ಪ್ರಮಾಣದಲ್ಲಿ ಸಂಗ್ರಹಿಸುವ, ವ್ಯವಸ್ಥಿತವಾಗಿ ದಾಖಲಿಸುವ ಭಾರತದ ಮೊಟ್ಟಮೊದಲ ಪ್ರಯತ್ನ ಇದಾಗಿದೆ.</p>.<p>ರೋಹಿಣಿ ನಿಲೇಕಣಿ ಸೆಂಟರ್ ಫಾರ್ ಬ್ರೈನ್ ಆ್ಯಂಡ್ ಮೈಂಡ್ನ (ಸಿಬಿಎಂ) ಸಂಶೋಧಕರು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಹಾಗೂ ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರ (ಎನ್ಸಿಬಿಎಸ್)– ಟಿಐಎಫ್ಆರ್ ಸಹಯೋಗದಲ್ಲಿ ಹತ್ತು ವರ್ಷಗಳಿಂದ ಸಂಶೋಧನೆ ನಡೆಸಿ, ‘ಕಾಮ್-ಬ್ರೈನ್’ ಅಭಿವೃದ್ಧಿಪಡಿಸಿದ್ದಾರೆ. ನಗರದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಈ ಡಿಜಿಟಲ್ ಮಾಹಿತಿ ಭಂಡಾರ ಅನಾವರಣ ಮಾಡಿದ್ದಾರೆ.</p>.<p>‘ನರಮನೋವೈದ್ಯಕೀಯ ಅಸ್ವಸ್ಥತೆಗಳನ್ನು ಅಧ್ಯಯನ ಮಾಡುವ ಗುರಿ ಹೊಂದಿರುವ ಭಾರತದ ಯಾವುದೇ ವೈದ್ಯರು ಮತ್ತು ಸಂಶೋಧಕರು, ಈ ಬಹುಮಾದರಿ ಡಿಜಿಟಲ್ ಭಂಡಾರದ ನೆರವು ಪಡೆಯಬಹುದಾಗಿದೆ. ಇದರಿಂದಾಗಿ ರೋಗದ ಆಕ್ರಮಣ, ಪ್ರಗತಿ ಮತ್ತು ಅದಕ್ಕೆ ಸಂಬಂಧಿಸಿರುವ ಜೈವಿಕ ಬದಲಾವಣೆಗಳು ಹಾಗೂ ರೋಗದ ಲಕ್ಷಣಗಳ ನಡುವಿನ ಪರಸ್ಪರ ಸಂಬಂಧಗಳನ್ನು ನಿಖರವಾಗಿ ಅರ್ಥ ಮಾಡಿಕೊಳ್ಳಬಹುದು’ ಎಂದು ಸಿಬಿಎಂ ಸಂಶೋಧಕರು ತಿಳಿಸಿದರು.</p>.<p>‘ಕಾಮ್-ಬ್ರೈನ್ ಅಡಿ ನಡೆಸಿದ ಸಂಶೋಧನೆಗಳು ಮಾನಸಿಕ ಅಸ್ವಸ್ಥತೆಗಳ ಕುರಿತಾದ ತಿಳಿವಳಿಕೆಯನ್ನು ಅರ್ಥೈಸುವಲ್ಲಿ ಅಪಾರ ಸಾಮರ್ಥ್ಯವನ್ನು ಹೊಂದಿವೆ. ರೋಗ ನಿವಾರಣೆ ವಿಧಾನವನ್ನು ಗುರುತಿಸಲು ಮತ್ತು ವ್ಯಕ್ತಿಗತ ಚಿಕಿತ್ಸೆಗಳನ್ನು ಯೋಜಿಸುವಲ್ಲಿ ಸಹಾಯ ಮಾಡುತ್ತದೆ’ ಎಂದರು.</p>.<p>ಚಿಕಿತ್ಸೆಗೆ ಸಹಕಾರಿ: ‘ಕಾಮ್–ಬ್ರೈನ್ ಅಡಿ ಸಂಗ್ರಹಿಸಲಾದ ದತ್ತಾಂಶವು ಪರಿಣಾಮಕಾರಿ ಚಿಕಿತ್ಸೆಯ ಅಭಿವೃದ್ಧಿಗೆ ನಮಗೆ ಸಹಾಯ ಮಾಡುತ್ತದೆ’ ಎಂದು ಎನ್ಸಿಬಿಎಸ್ನ ನಿರ್ದೇಶಕ ಪ್ರೊ.ಎಲ್.ಎಸ್. ಶಶಿಧರ್ ಹೇಳಿದರು.</p>.<p>‘ಸಾಂಪ್ರದಾಯಿಕ ರೋಗನಿರ್ಣಯ ಚೌಕಟ್ಟುಗಳನ್ನು ಮೀರಿದ, ತೀವ್ರ ಮನೋವೈದ್ಯಕೀಯ ಕಾಯಿಲೆಗಳ ಜೈವಿಕ ಗುರುತುಗಳನ್ನು ಗುರುತಿಸುವುದು ಈ ಯೋಜನೆಯ ಪ್ರಾಥಮಿಕ ಗುರಿಯಾಗಿದೆ. ಇದರ ಜತೆಗೆ, ರೋಗದ ಮೂಲಭೂತ ಜೈವಿಕ ಕಾರ್ಯವಿಧಾನಗಳನ್ನು ಗುರುತಿಸಲು ನಾವು ಪ್ರಯತ್ನಿಸುತ್ತೇವೆ’ ಎಂದು ಸಿಬಿಎಂ– ನಿಮ್ಹಾನ್ಸ್ನ ಸಂಯೋಜಕರಾದ ಪ್ರೊ.ವೈ.ಸಿ. ಜನಾರ್ದನ ರೆಡ್ಡಿ ಮಾಹಿತಿ ನೀಡಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260401-4-302653491</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>