<p>ಕರಾವಳಿ ತೀರಕ್ಕೆ ಚಂಡಮಾರುತ ಅಪ್ಪಳಿಸಿದಾಗ ನಾವೆಲ್ಲರೂ ಮೇಲ್ಭಾಗದಲ್ಲಿ ಅಬ್ಬರಿಸುವ ಅಲೆಗಳು, ಜೋರು ಗಾಳಿ-ಮಳೆ ಮತ್ತು ಆಗುವ ಹಾನಿಯನ್ನಷ್ಟೇ ನೋಡುತ್ತೇವೆ. ಆದರೆ, ಅದೇ ಸಮಯದಲ್ಲಿ ಸಮುದ್ರದ ನೂರಾರು ಅಡಿ ಆಳದಲ್ಲಿ ಏನಾಗುತ್ತಿರಬಹುದು? ಚಂಡಮಾರುತದ ಭೀಕರ ಗಾಳಿ ಮತ್ತು ಅಲೆಗಳು ಸಾಗರದ ಆಳದ ಪರಿಸರವನ್ನು ಹೇಗೆ ಬದಲಾಯಿಸುತ್ತವೆ? ಈ ನಿಗೂಢ ಪ್ರಶ್ನೆಗೆ ಭಾರತೀಯ ವಿಜ್ಞಾನಿಗಳು ಈಗ ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ ಅದ್ಭುತ ಉತ್ತರವನ್ನು ಹುಡುಕಿದ್ದಾರೆ. ಜಲಾಂತರ್ಗಾಮಿ ರೋಬೋಟಿಕ್ ಡ್ರೋನ್ ಒಂದನ್ನು ಬಳಸಿದ ವಿಜ್ಞಾನಿಗಳು, ಭೀಕರ ಚಂಡಮಾರುತವು ಸಮುದ್ರದ ಆಳದಲ್ಲಿ ಅಡಗಿರುವ ಪೋಷಕಾಂಶಗಳನ್ನು ಮೇಲಕ್ಕೆ ತಂದು, ಸಸ್ಯಪ್ರಪಂಚಕ್ಕೆ ಹೇಗೆ ಮರುಜೀವ ನೀಡುತ್ತದೆ ಎಂಬುದನ್ನು ಮೊದಲ ಬಾರಿಗೆ ಕಣ್ಣಾರೆ ಕಂಡಿದ್ದಾರೆ.</p>.<p>ನಮ್ಮ ಕರ್ನಾಟಕದ ಕಾರವಾರ, ಮಂಗಳೂರು ಅಥವಾ ಉಡುಪಿಯ ಕರಾವಳಿ ಭಾಗದ ಜನರಿಗೆ ಅರಬ್ಬಿ ಸಮುದ್ರದಲ್ಲಿ ಏಳುವ ಚಂಡಮಾರುತಗಳ ಪರಿಚಯ ಚೆನ್ನಾಗಿಯೇ ಇದೆ. ಪ್ರಕೃತಿಯ ಈ ವಿಕೋಪಗಳು ಭೂಮಿಯ ಮೇಲೆ ತಲ್ಲಣ ಸೃಷ್ಟಿಸಿದರೂ, ಸಮುದ್ರದ ಆಳದಲ್ಲಿ ಮಾತ್ರ ಇವು ಜೀವಜಗತ್ತಿನ ಬೆಳವಣಿಗೆಗೆ ಕಾರಣವಾಗುತ್ತವೆ ಎಂಬುದು ಈ ಹೊಸ ಸಂಶೋಧನೆಯಿಂದ ತಿಳಿದುಬಂದಿದೆ. ಹೈದರಾಬಾದ್ನಲ್ಲಿರುವ ‘ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರ’ದ (INCOIS) ವಿಜ್ಞಾನಿಗಳು ಈ ಸಾಧನೆಯನ್ನು ಮಾಡಿದ್ದಾರೆ.</p>.<p>2023ರ ಮೇ ತಿಂಗಳಲ್ಲಿ ಬಂಗಾಳ ಕೊಲ್ಲಿಯಲ್ಲಿ ‘ಮೋಚಾ’ ಎಂಬ ಭೀಕರ ಚಂಡಮಾರುತ ಅಪ್ಪಳಿಸಿತ್ತು. ಆ ಸಮಯದಲ್ಲಿ ಇಡೀ ಸಮುದ್ರವೇ ರೊಚ್ಚಿಗೆದ್ದಾಗ, ವಿಜ್ಞಾನಿಗಳು ‘ಸ್ಲೋಕಮ್ ಜಿ3’ (Slocum G3) ಎಂಬ ಅತ್ಯಾಧುನಿಕ ಸಮುದ್ರದಾಳದ ‘ಗ್ಲೈಡರ್’ ಅಥವಾ ‘ರೋಬೋಟಿಕ್ ಡ್ರೋನ್’ ಅನ್ನು ನೀರಿನೊಳಗೆ ಬಿಟ್ಟಿದ್ದರು. ಟಾರ್ಪಿಡೊ ಆಕಾರದಲ್ಲಿರುವ ಈ ಡ್ರೋನ್, ತನ್ನ ತೂಕ ಮತ್ತು ನೀರಿನ ತೇಲುವಿಕೆ ಸಾಮರ್ಥ್ಯವನ್ನು ಬದಲಾಯಿಸಿಕೊಳ್ಳುತ್ತಾ ಸಮುದ್ರದ ಸುಮಾರು ಸಾವಿರ ಮೀಟರ್ ಆಳದವರೆಗೆ ಮುಳುಗಬಲ್ಲದು. ದಡದಲ್ಲೇ ಕುಳಿತು ವಿಜ್ಞಾನಿಗಳು ಇದನ್ನು ನಿಯಂತ್ರಿಸುತ್ತಿದ್ದರು. ಚಂಡಮಾರುತದ ಭೀಕರ ಗಾಳಿಗೆ ತರಂಗಗಳು ಏಳುತ್ತಿದ್ದಾಗಲೂ, ಈ ಡ್ರೋನ್ ಮಾತ್ರ ಸಮುದ್ರದ ಆಳದಲ್ಲಿ ಸುರಕ್ಷಿತವಾಗಿ ಈಜುತ್ತಾ ಸಾಗರದ ಭೌತಿಕ ಮತ್ತು ಜೈವಿಕ ಬದಲಾವಣೆಗಳ ನಿಖರ ಮಾಹಿತಿಯನ್ನು ಸ್ಯಾಟಲೈಟ್ ಮೂಲಕ ವಿಜ್ಞಾನಿಗಳಿಗೆ ರವಾನಿಸುತ್ತಿತ್ತು.</p>.<p>ಸಾಮಾನ್ಯವಾಗಿ ಬಂಗಾಳ ಕೊಲ್ಲಿಯ ಮೇಲ್ಭಾಗದಲ್ಲಿ ಮಳೆ ಮತ್ತು ನದಿಗಳ ನೀರು ಬಂದು ಸೇರುವುದರಿಂದ ಬೆಚ್ಚಗಿನ ಮತ್ತು ಸಿಹಿನೀರಿನ ಒಂದು ಸ್ಥಿರವಾದ ಪದರ ನಿರ್ಮಾಣವಾಗಿರುತ್ತದೆ. ಇದನ್ನು ವಿಜ್ಞಾನಿಗಳು ‘ಸ್ಟ್ರಾಟಿಫಿಕೇಶನ್’ ಅಥವಾ ‘ಪದರ ವಿನ್ಯಾಸ’ ಎನ್ನುತ್ತಾರೆ. ಈ ಮೇಲಿನ ಪದರವು ಒಂದು ಬಗೆಯಲ್ಲಿ ತುಂಬಾ ಧೃಡವಾಗಿ ನಮ್ಮ ಮನೆಗಳಲ್ಲಿ ಇರುವ ಮೇಲ್ಛಾವಣಿಯಂತೆ ಇರುವುದರಿಂದ, ಸಮುದ್ರದ ಆಳದಲ್ಲಿರುವ ತಂಪಾದ ಮತ್ತು ಪೋಷಕಾಂಶಗಳಿಂದ ಕೂಡಿದ ನೀರು ಸೂರ್ಯನ ಬೆಳಕು ಬೀಳುವ ಮೇಲ್ಭಾಗಕ್ಕೆ ಬರಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದಾಗಿ ಅಲ್ಲಿನ ಸಾಗರ ಜೀವಿಗಳಿಗೆ ಆಹಾರದ ಕೊರತೆ ಇರುತ್ತಿತ್ತು. ಆದರೆ, ಮೋಚಾ ಚಂಡಮಾರುತದ ಅತಿವೇಗದ ಗಾಳಿಯು ಸಮುದ್ರದ ಈ ನೈಸರ್ಗಿಕ ಪದರಗಳನ್ನೇ ಒಡೆದುಹಾಕಿತು. ವೈಜ್ಞಾನಿಕವಾಗಿ ‘ಅಪ್ವೆಲ್ಲಿಂಗ್’ (Upwelling) ಅಥವಾ ‘ಆಳದ ನೀರು ಮೇಲಕ್ಕೆ ಬರುವ ಪ್ರಕ್ರಿಯೆ’ ಎಂದು ಕರೆಯಲಾಗುವ ಈ ವಿದ್ಯಮಾನದಿಂದಾಗಿ ಕತ್ತಲಲ್ಲಿ ಅಡಗಿದ್ದ ನೂರಾರು ಪೋಷಕಾಂಶಗಳು ಸಮುದ್ರದ ಮೇಲ್ಮೈಗೆ ಬಂದವು.</p>.<p>ಹೀಗೆ ಪೋಷಕಾಂಶಗಳು ಮೇಲಕ್ಕೆ ಬರುತ್ತಿದ್ದಂತೆ, ಸಮುದ್ರದ ಮೇಲ್ಭಾಗದಲ್ಲಿದ್ದ ‘ಫೈಟೊಪ್ಲಾಂಕ್ಟನ್’ (Phytoplankton) ಎಂಬ ಸೂಕ್ಷ್ಮಜೀವಿಗಳಿಗೆ ಹಬ್ಬದೂಟ ಸಿಕ್ಕಂತಾಯಿತು. ‘ಫೈಟೊಪ್ಲಾಂಕ್ಟನ್’ ಎಂದರೆ ಕಣ್ಣಿಗೆ ಕಾಣಿಸದ ಸೂಕ್ಷ್ಮ ಸಸ್ಯಜೀವಿಗಳು. ಇವುಗಳನ್ನು ನಮ್ಮ ಕೆರೆಗಳು, ತೊರೆಗಳು ಅಥವಾ ನದಿಗಳಲ್ಲೂ ಕಾಣಬಹುದು, ಹಾಗೆಯೇ ಇವುಗಳು ಸಮುದ್ರದಲ್ಲೂ ಸಾಕಷ್ಟಿವೆ. ಇವು ಸಸ್ಯಗಳಂತೆಯೇ ಸೂರ್ಯನ ಬೆಳಕನ್ನು ಬಳಸಿ ‘ದ್ಯುತಿಸಂಶ್ಲೇಷಣೆ’ (Photosynthesis) ಕ್ರಿಯೆಯ ಮೂಲಕ ಆಹಾರವನ್ನು ತಯಾರಿಸಿಕೊಳ್ಳುತ್ತವೆ. ಸಮುದ್ರದ ಆಳದಿಂದ ಬಂದ ಆಹಾರ ಮತ್ತು ಚಂಡಮಾರುತ ಸರಿದ ನಂತರ ಸಿಕ್ಕ ಸೂರ್ಯನ ಬೆಳಕಿನಿಂದಾಗಿ ಈ ಸೂಕ್ಷ್ಮಜೀವಿಗಳು ಅತ್ಯಂತ ವೇಗವಾಗಿ ವೃದ್ಧಿಯಾಗತೊಡಗಿದವು. ಚಂಡಮಾರುತ ಹಾದುಹೋದ ಎಂಟು ದಿನಗಳ ನಂತರ ಇವುಗಳ ಸಂಖ್ಯೆ ದಾಖಲೆ ಮಟ್ಟಕ್ಕೆ ಏರಿತು. ಗ್ಲೈಡರ್ ಡ್ರೋನ್ ಕಳುಹಿಸಿದ ದತ್ತಾಂಶದಲ್ಲಿ ಕಡಲ ಸಸ್ಯಗಳ ಹಸಿರುಬಣ್ಣಕ್ಕೆ ಕಾರಣವಾಗುವ ‘ಕ್ಲೋರೊಫಿಲ್’ ಅಂಶವು ವಿಪರೀತವಾಗಿ ಹೆಚ್ಚಿರುವುದು ಪತ್ತೆಯಾಯಿತು.</p>.<p>ಈ ಸೂಕ್ಷ್ಮ ಕಡಲ ಸಸ್ಯಗಳು ದೊಡ್ಡ ಪ್ರಮಾಣದಲ್ಲಿ ವೃದ್ಧಿಯಾದಾಗ, ಅವು ವಾತಾವರಣಕ್ಕೆ ಅಪಾರ ಪ್ರಮಾಣದ ಕರಗಿದ ಆಮ್ಲಜನಕವನ್ನು (Dissolved Oxygen) ಬಿಡುಗಡೆ ಮಾಡಿದವು. ಈ ರೋಬೋಟಿಕ್ ಡ್ರೋನ್ ಎಷ್ಟು ನಿಖರವಾದ ಮಾಹಿತಿ ನೀಡಿದೆಯೆಂದರೆ, ಅದು ಸಮುದ್ರದ ದೈನಂದಿನ ಉಸಿರಾಟವನ್ನೇ ದಾಖಲಿಸಿದೆ. ಅಂದರೆ ಹಗಲಿನಲ್ಲಿ ಸೂರ್ಯನ ಬೆಳಕಿರುವಾಗ ಕಡಲ ಸಸ್ಯಗಳು ಸಕ್ರಿಯವಾಗಿ ಆಮ್ಲಜನಕವನ್ನು ಉತ್ಪಾದಿಸುವುದರಿಂದ ನೀರಿನಲ್ಲಿ ಆಮ್ಲಜನಕದ ಮಟ್ಟ ಹೆಚ್ಚಿರುತ್ತಿತ್ತು ಮತ್ತು ರಾತ್ರಿಯ ಸಮಯದಲ್ಲಿ ಅವುಗಳೂ ಆಮ್ಲಜನಕವನ್ನು ಬಳಸುವುದರಿಂದ ಆ ಮಟ್ಟವು ಕಡಿಮೆಯಾಗುತ್ತಿತ್ತು. ಸಮುದ್ರದ ಈ ದೈನಂದಿನ ಉಸಿರಾಟದ ಏರಿಳಿತವನ್ನು ವಿಜ್ಞಾನಿಗಳು ಮೊದಲ ಬಾರಿಗೆ ಇಷ್ಟು ನಿಖರವಾಗಿ ಗಮನಿಸಿದ್ದಾರೆ.</p>.<p>ಇಲ್ಲಿಯವರೆಗೆ ವಿಜ್ಞಾನಿಗಳು ಇಂತಹ ಬದಲಾವಣೆಗಳನ್ನು ತಿಳಿಯಲು ಉಪಗ್ರಹಗಳನ್ನು ಅವಲಂಬಿಸಿದ್ದರು. ಆದರೆ ಚಂಡಮಾರುತ ಬಂದಾಗ ದಟ್ಟವಾದ ಮೋಡಗಳು ಇಡೀ ಆಕಾಶವನ್ನು ಮುಚ್ಚಿಕೊಳ್ಳುವುದರಿಂದ ಉಪಗ್ರಹಗಳಿಗೆ ಸಮುದ್ರದ ಒಳಗೆ ಏನಾಗುತ್ತಿದೆ ಎಂದು ನೋಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಚಂಡಮಾರುತದ ಭೀಕರ ಅಲೆಗಳ ನಡುವೆ ವಿಜ್ಞಾನಿಗಳ ಹಡಗನ್ನು ಕಳುಹಿಸುವುದು ಅತ್ಯಂತ ಅಪಾಯಕಾರಿ ಕೆಲಸವಾಗಿತ್ತು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಈ ಸಮುದ್ರದಾಳದ ರೋಬೋಟಿಕ್ ಡ್ರೋನ್ ದೊಡ್ಡ ಯಶಸ್ಸನ್ನು ತಂದುಕೊಟ್ಟಿದೆ. ಚಂಡಮಾರುತದ ನೇರ ಹಾದಿಯಲ್ಲೇ ಇದ್ದುಕೊಂಡು, ಹಗಲು-ರಾತ್ರಿ ಎನ್ನದೆ ನಿರಂತರವಾಗಿ ಉಷ್ಣಾಂಶ ಮತ್ತು ಲವಣಾಂಶದ ನಿಖರ ಮಾಹಿತಿಯನ್ನು ಇದು ಸಂಗ್ರಹಿಸಿದೆ.</p>.<p>ಈ ಅದ್ಭುತ ಯಶಸ್ಸು ಕೇವಲ ಬಂಗಾಳಕೊಲ್ಲಿಗಷ್ಟೇ ಸೀಮಿತವಲ್ಲ. ಕರ್ನಾಟಕದ ಕರಾವಳಿ ಭಾಗದಲ್ಲೂ ಆಗಾಗ ಸಂಭವಿಸುವ ಚಂಡಮಾರುತಗಳ ಮುನ್ಸೂಚನೆಯನ್ನು ನೀಡಲು, ಹವಾಮಾನ ಮಾದರಿಗಳನ್ನು ಸುಧಾರಿಸಲು ಮತ್ತು ಜಾಗತಿಕ ತಾಪಮಾನದ ಪರಿಣಾಮಗಳನ್ನು ಅಧ್ಯಯನ ಮಾಡಲು ಈ ತಂತ್ರಜ್ಞಾನವು ದಾರಿದೀಪವಾಗಲಿದೆ. ಪ್ರಕೃತಿಯ ವಿಕೋಪಗಳ ನಡುವೆಯೂ ಜೀವಜಗತ್ತು ಹೇಗೆ ತನ್ನ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ ಎಂಬುದಕ್ಕೆ ಭಾರತೀಯ ವಿಜ್ಞಾನಿಗಳ ಈ ಸಂಶೋಧನೆಯೇ ಸಾಕ್ಷಿ. ಸಾಂಪ್ರದಾಯಿಕ ಸಂಶೋಧನಾ ವಿಧಾನಗಳನ್ನು ಮೀರಿ ನಿಂತಿರುವ ಈ ಸ್ವಯಂಚಾಲಿತ ಡ್ರೋನ್ಗಳು ಮುಂದಿನ ದಿನಗಳಲ್ಲಿ ಹವಾಮಾನ ಮತ್ತು ಸಾಗರ ಸಂಶೋಧನೆಯ ಭವಿಷ್ಯವನ್ನು ಸಂಪೂರ್ಣವಾಗಿ ಬದಲಾಯಿಸಲಿವೆ.v</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260520-51-307289279</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕರಾವಳಿ ತೀರಕ್ಕೆ ಚಂಡಮಾರುತ ಅಪ್ಪಳಿಸಿದಾಗ ನಾವೆಲ್ಲರೂ ಮೇಲ್ಭಾಗದಲ್ಲಿ ಅಬ್ಬರಿಸುವ ಅಲೆಗಳು, ಜೋರು ಗಾಳಿ-ಮಳೆ ಮತ್ತು ಆಗುವ ಹಾನಿಯನ್ನಷ್ಟೇ ನೋಡುತ್ತೇವೆ. ಆದರೆ, ಅದೇ ಸಮಯದಲ್ಲಿ ಸಮುದ್ರದ ನೂರಾರು ಅಡಿ ಆಳದಲ್ಲಿ ಏನಾಗುತ್ತಿರಬಹುದು? ಚಂಡಮಾರುತದ ಭೀಕರ ಗಾಳಿ ಮತ್ತು ಅಲೆಗಳು ಸಾಗರದ ಆಳದ ಪರಿಸರವನ್ನು ಹೇಗೆ ಬದಲಾಯಿಸುತ್ತವೆ? ಈ ನಿಗೂಢ ಪ್ರಶ್ನೆಗೆ ಭಾರತೀಯ ವಿಜ್ಞಾನಿಗಳು ಈಗ ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ ಅದ್ಭುತ ಉತ್ತರವನ್ನು ಹುಡುಕಿದ್ದಾರೆ. ಜಲಾಂತರ್ಗಾಮಿ ರೋಬೋಟಿಕ್ ಡ್ರೋನ್ ಒಂದನ್ನು ಬಳಸಿದ ವಿಜ್ಞಾನಿಗಳು, ಭೀಕರ ಚಂಡಮಾರುತವು ಸಮುದ್ರದ ಆಳದಲ್ಲಿ ಅಡಗಿರುವ ಪೋಷಕಾಂಶಗಳನ್ನು ಮೇಲಕ್ಕೆ ತಂದು, ಸಸ್ಯಪ್ರಪಂಚಕ್ಕೆ ಹೇಗೆ ಮರುಜೀವ ನೀಡುತ್ತದೆ ಎಂಬುದನ್ನು ಮೊದಲ ಬಾರಿಗೆ ಕಣ್ಣಾರೆ ಕಂಡಿದ್ದಾರೆ.</p>.<p>ನಮ್ಮ ಕರ್ನಾಟಕದ ಕಾರವಾರ, ಮಂಗಳೂರು ಅಥವಾ ಉಡುಪಿಯ ಕರಾವಳಿ ಭಾಗದ ಜನರಿಗೆ ಅರಬ್ಬಿ ಸಮುದ್ರದಲ್ಲಿ ಏಳುವ ಚಂಡಮಾರುತಗಳ ಪರಿಚಯ ಚೆನ್ನಾಗಿಯೇ ಇದೆ. ಪ್ರಕೃತಿಯ ಈ ವಿಕೋಪಗಳು ಭೂಮಿಯ ಮೇಲೆ ತಲ್ಲಣ ಸೃಷ್ಟಿಸಿದರೂ, ಸಮುದ್ರದ ಆಳದಲ್ಲಿ ಮಾತ್ರ ಇವು ಜೀವಜಗತ್ತಿನ ಬೆಳವಣಿಗೆಗೆ ಕಾರಣವಾಗುತ್ತವೆ ಎಂಬುದು ಈ ಹೊಸ ಸಂಶೋಧನೆಯಿಂದ ತಿಳಿದುಬಂದಿದೆ. ಹೈದರಾಬಾದ್ನಲ್ಲಿರುವ ‘ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರ’ದ (INCOIS) ವಿಜ್ಞಾನಿಗಳು ಈ ಸಾಧನೆಯನ್ನು ಮಾಡಿದ್ದಾರೆ.</p>.<p>2023ರ ಮೇ ತಿಂಗಳಲ್ಲಿ ಬಂಗಾಳ ಕೊಲ್ಲಿಯಲ್ಲಿ ‘ಮೋಚಾ’ ಎಂಬ ಭೀಕರ ಚಂಡಮಾರುತ ಅಪ್ಪಳಿಸಿತ್ತು. ಆ ಸಮಯದಲ್ಲಿ ಇಡೀ ಸಮುದ್ರವೇ ರೊಚ್ಚಿಗೆದ್ದಾಗ, ವಿಜ್ಞಾನಿಗಳು ‘ಸ್ಲೋಕಮ್ ಜಿ3’ (Slocum G3) ಎಂಬ ಅತ್ಯಾಧುನಿಕ ಸಮುದ್ರದಾಳದ ‘ಗ್ಲೈಡರ್’ ಅಥವಾ ‘ರೋಬೋಟಿಕ್ ಡ್ರೋನ್’ ಅನ್ನು ನೀರಿನೊಳಗೆ ಬಿಟ್ಟಿದ್ದರು. ಟಾರ್ಪಿಡೊ ಆಕಾರದಲ್ಲಿರುವ ಈ ಡ್ರೋನ್, ತನ್ನ ತೂಕ ಮತ್ತು ನೀರಿನ ತೇಲುವಿಕೆ ಸಾಮರ್ಥ್ಯವನ್ನು ಬದಲಾಯಿಸಿಕೊಳ್ಳುತ್ತಾ ಸಮುದ್ರದ ಸುಮಾರು ಸಾವಿರ ಮೀಟರ್ ಆಳದವರೆಗೆ ಮುಳುಗಬಲ್ಲದು. ದಡದಲ್ಲೇ ಕುಳಿತು ವಿಜ್ಞಾನಿಗಳು ಇದನ್ನು ನಿಯಂತ್ರಿಸುತ್ತಿದ್ದರು. ಚಂಡಮಾರುತದ ಭೀಕರ ಗಾಳಿಗೆ ತರಂಗಗಳು ಏಳುತ್ತಿದ್ದಾಗಲೂ, ಈ ಡ್ರೋನ್ ಮಾತ್ರ ಸಮುದ್ರದ ಆಳದಲ್ಲಿ ಸುರಕ್ಷಿತವಾಗಿ ಈಜುತ್ತಾ ಸಾಗರದ ಭೌತಿಕ ಮತ್ತು ಜೈವಿಕ ಬದಲಾವಣೆಗಳ ನಿಖರ ಮಾಹಿತಿಯನ್ನು ಸ್ಯಾಟಲೈಟ್ ಮೂಲಕ ವಿಜ್ಞಾನಿಗಳಿಗೆ ರವಾನಿಸುತ್ತಿತ್ತು.</p>.<p>ಸಾಮಾನ್ಯವಾಗಿ ಬಂಗಾಳ ಕೊಲ್ಲಿಯ ಮೇಲ್ಭಾಗದಲ್ಲಿ ಮಳೆ ಮತ್ತು ನದಿಗಳ ನೀರು ಬಂದು ಸೇರುವುದರಿಂದ ಬೆಚ್ಚಗಿನ ಮತ್ತು ಸಿಹಿನೀರಿನ ಒಂದು ಸ್ಥಿರವಾದ ಪದರ ನಿರ್ಮಾಣವಾಗಿರುತ್ತದೆ. ಇದನ್ನು ವಿಜ್ಞಾನಿಗಳು ‘ಸ್ಟ್ರಾಟಿಫಿಕೇಶನ್’ ಅಥವಾ ‘ಪದರ ವಿನ್ಯಾಸ’ ಎನ್ನುತ್ತಾರೆ. ಈ ಮೇಲಿನ ಪದರವು ಒಂದು ಬಗೆಯಲ್ಲಿ ತುಂಬಾ ಧೃಡವಾಗಿ ನಮ್ಮ ಮನೆಗಳಲ್ಲಿ ಇರುವ ಮೇಲ್ಛಾವಣಿಯಂತೆ ಇರುವುದರಿಂದ, ಸಮುದ್ರದ ಆಳದಲ್ಲಿರುವ ತಂಪಾದ ಮತ್ತು ಪೋಷಕಾಂಶಗಳಿಂದ ಕೂಡಿದ ನೀರು ಸೂರ್ಯನ ಬೆಳಕು ಬೀಳುವ ಮೇಲ್ಭಾಗಕ್ಕೆ ಬರಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದಾಗಿ ಅಲ್ಲಿನ ಸಾಗರ ಜೀವಿಗಳಿಗೆ ಆಹಾರದ ಕೊರತೆ ಇರುತ್ತಿತ್ತು. ಆದರೆ, ಮೋಚಾ ಚಂಡಮಾರುತದ ಅತಿವೇಗದ ಗಾಳಿಯು ಸಮುದ್ರದ ಈ ನೈಸರ್ಗಿಕ ಪದರಗಳನ್ನೇ ಒಡೆದುಹಾಕಿತು. ವೈಜ್ಞಾನಿಕವಾಗಿ ‘ಅಪ್ವೆಲ್ಲಿಂಗ್’ (Upwelling) ಅಥವಾ ‘ಆಳದ ನೀರು ಮೇಲಕ್ಕೆ ಬರುವ ಪ್ರಕ್ರಿಯೆ’ ಎಂದು ಕರೆಯಲಾಗುವ ಈ ವಿದ್ಯಮಾನದಿಂದಾಗಿ ಕತ್ತಲಲ್ಲಿ ಅಡಗಿದ್ದ ನೂರಾರು ಪೋಷಕಾಂಶಗಳು ಸಮುದ್ರದ ಮೇಲ್ಮೈಗೆ ಬಂದವು.</p>.<p>ಹೀಗೆ ಪೋಷಕಾಂಶಗಳು ಮೇಲಕ್ಕೆ ಬರುತ್ತಿದ್ದಂತೆ, ಸಮುದ್ರದ ಮೇಲ್ಭಾಗದಲ್ಲಿದ್ದ ‘ಫೈಟೊಪ್ಲಾಂಕ್ಟನ್’ (Phytoplankton) ಎಂಬ ಸೂಕ್ಷ್ಮಜೀವಿಗಳಿಗೆ ಹಬ್ಬದೂಟ ಸಿಕ್ಕಂತಾಯಿತು. ‘ಫೈಟೊಪ್ಲಾಂಕ್ಟನ್’ ಎಂದರೆ ಕಣ್ಣಿಗೆ ಕಾಣಿಸದ ಸೂಕ್ಷ್ಮ ಸಸ್ಯಜೀವಿಗಳು. ಇವುಗಳನ್ನು ನಮ್ಮ ಕೆರೆಗಳು, ತೊರೆಗಳು ಅಥವಾ ನದಿಗಳಲ್ಲೂ ಕಾಣಬಹುದು, ಹಾಗೆಯೇ ಇವುಗಳು ಸಮುದ್ರದಲ್ಲೂ ಸಾಕಷ್ಟಿವೆ. ಇವು ಸಸ್ಯಗಳಂತೆಯೇ ಸೂರ್ಯನ ಬೆಳಕನ್ನು ಬಳಸಿ ‘ದ್ಯುತಿಸಂಶ್ಲೇಷಣೆ’ (Photosynthesis) ಕ್ರಿಯೆಯ ಮೂಲಕ ಆಹಾರವನ್ನು ತಯಾರಿಸಿಕೊಳ್ಳುತ್ತವೆ. ಸಮುದ್ರದ ಆಳದಿಂದ ಬಂದ ಆಹಾರ ಮತ್ತು ಚಂಡಮಾರುತ ಸರಿದ ನಂತರ ಸಿಕ್ಕ ಸೂರ್ಯನ ಬೆಳಕಿನಿಂದಾಗಿ ಈ ಸೂಕ್ಷ್ಮಜೀವಿಗಳು ಅತ್ಯಂತ ವೇಗವಾಗಿ ವೃದ್ಧಿಯಾಗತೊಡಗಿದವು. ಚಂಡಮಾರುತ ಹಾದುಹೋದ ಎಂಟು ದಿನಗಳ ನಂತರ ಇವುಗಳ ಸಂಖ್ಯೆ ದಾಖಲೆ ಮಟ್ಟಕ್ಕೆ ಏರಿತು. ಗ್ಲೈಡರ್ ಡ್ರೋನ್ ಕಳುಹಿಸಿದ ದತ್ತಾಂಶದಲ್ಲಿ ಕಡಲ ಸಸ್ಯಗಳ ಹಸಿರುಬಣ್ಣಕ್ಕೆ ಕಾರಣವಾಗುವ ‘ಕ್ಲೋರೊಫಿಲ್’ ಅಂಶವು ವಿಪರೀತವಾಗಿ ಹೆಚ್ಚಿರುವುದು ಪತ್ತೆಯಾಯಿತು.</p>.<p>ಈ ಸೂಕ್ಷ್ಮ ಕಡಲ ಸಸ್ಯಗಳು ದೊಡ್ಡ ಪ್ರಮಾಣದಲ್ಲಿ ವೃದ್ಧಿಯಾದಾಗ, ಅವು ವಾತಾವರಣಕ್ಕೆ ಅಪಾರ ಪ್ರಮಾಣದ ಕರಗಿದ ಆಮ್ಲಜನಕವನ್ನು (Dissolved Oxygen) ಬಿಡುಗಡೆ ಮಾಡಿದವು. ಈ ರೋಬೋಟಿಕ್ ಡ್ರೋನ್ ಎಷ್ಟು ನಿಖರವಾದ ಮಾಹಿತಿ ನೀಡಿದೆಯೆಂದರೆ, ಅದು ಸಮುದ್ರದ ದೈನಂದಿನ ಉಸಿರಾಟವನ್ನೇ ದಾಖಲಿಸಿದೆ. ಅಂದರೆ ಹಗಲಿನಲ್ಲಿ ಸೂರ್ಯನ ಬೆಳಕಿರುವಾಗ ಕಡಲ ಸಸ್ಯಗಳು ಸಕ್ರಿಯವಾಗಿ ಆಮ್ಲಜನಕವನ್ನು ಉತ್ಪಾದಿಸುವುದರಿಂದ ನೀರಿನಲ್ಲಿ ಆಮ್ಲಜನಕದ ಮಟ್ಟ ಹೆಚ್ಚಿರುತ್ತಿತ್ತು ಮತ್ತು ರಾತ್ರಿಯ ಸಮಯದಲ್ಲಿ ಅವುಗಳೂ ಆಮ್ಲಜನಕವನ್ನು ಬಳಸುವುದರಿಂದ ಆ ಮಟ್ಟವು ಕಡಿಮೆಯಾಗುತ್ತಿತ್ತು. ಸಮುದ್ರದ ಈ ದೈನಂದಿನ ಉಸಿರಾಟದ ಏರಿಳಿತವನ್ನು ವಿಜ್ಞಾನಿಗಳು ಮೊದಲ ಬಾರಿಗೆ ಇಷ್ಟು ನಿಖರವಾಗಿ ಗಮನಿಸಿದ್ದಾರೆ.</p>.<p>ಇಲ್ಲಿಯವರೆಗೆ ವಿಜ್ಞಾನಿಗಳು ಇಂತಹ ಬದಲಾವಣೆಗಳನ್ನು ತಿಳಿಯಲು ಉಪಗ್ರಹಗಳನ್ನು ಅವಲಂಬಿಸಿದ್ದರು. ಆದರೆ ಚಂಡಮಾರುತ ಬಂದಾಗ ದಟ್ಟವಾದ ಮೋಡಗಳು ಇಡೀ ಆಕಾಶವನ್ನು ಮುಚ್ಚಿಕೊಳ್ಳುವುದರಿಂದ ಉಪಗ್ರಹಗಳಿಗೆ ಸಮುದ್ರದ ಒಳಗೆ ಏನಾಗುತ್ತಿದೆ ಎಂದು ನೋಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಚಂಡಮಾರುತದ ಭೀಕರ ಅಲೆಗಳ ನಡುವೆ ವಿಜ್ಞಾನಿಗಳ ಹಡಗನ್ನು ಕಳುಹಿಸುವುದು ಅತ್ಯಂತ ಅಪಾಯಕಾರಿ ಕೆಲಸವಾಗಿತ್ತು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಈ ಸಮುದ್ರದಾಳದ ರೋಬೋಟಿಕ್ ಡ್ರೋನ್ ದೊಡ್ಡ ಯಶಸ್ಸನ್ನು ತಂದುಕೊಟ್ಟಿದೆ. ಚಂಡಮಾರುತದ ನೇರ ಹಾದಿಯಲ್ಲೇ ಇದ್ದುಕೊಂಡು, ಹಗಲು-ರಾತ್ರಿ ಎನ್ನದೆ ನಿರಂತರವಾಗಿ ಉಷ್ಣಾಂಶ ಮತ್ತು ಲವಣಾಂಶದ ನಿಖರ ಮಾಹಿತಿಯನ್ನು ಇದು ಸಂಗ್ರಹಿಸಿದೆ.</p>.<p>ಈ ಅದ್ಭುತ ಯಶಸ್ಸು ಕೇವಲ ಬಂಗಾಳಕೊಲ್ಲಿಗಷ್ಟೇ ಸೀಮಿತವಲ್ಲ. ಕರ್ನಾಟಕದ ಕರಾವಳಿ ಭಾಗದಲ್ಲೂ ಆಗಾಗ ಸಂಭವಿಸುವ ಚಂಡಮಾರುತಗಳ ಮುನ್ಸೂಚನೆಯನ್ನು ನೀಡಲು, ಹವಾಮಾನ ಮಾದರಿಗಳನ್ನು ಸುಧಾರಿಸಲು ಮತ್ತು ಜಾಗತಿಕ ತಾಪಮಾನದ ಪರಿಣಾಮಗಳನ್ನು ಅಧ್ಯಯನ ಮಾಡಲು ಈ ತಂತ್ರಜ್ಞಾನವು ದಾರಿದೀಪವಾಗಲಿದೆ. ಪ್ರಕೃತಿಯ ವಿಕೋಪಗಳ ನಡುವೆಯೂ ಜೀವಜಗತ್ತು ಹೇಗೆ ತನ್ನ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ ಎಂಬುದಕ್ಕೆ ಭಾರತೀಯ ವಿಜ್ಞಾನಿಗಳ ಈ ಸಂಶೋಧನೆಯೇ ಸಾಕ್ಷಿ. ಸಾಂಪ್ರದಾಯಿಕ ಸಂಶೋಧನಾ ವಿಧಾನಗಳನ್ನು ಮೀರಿ ನಿಂತಿರುವ ಈ ಸ್ವಯಂಚಾಲಿತ ಡ್ರೋನ್ಗಳು ಮುಂದಿನ ದಿನಗಳಲ್ಲಿ ಹವಾಮಾನ ಮತ್ತು ಸಾಗರ ಸಂಶೋಧನೆಯ ಭವಿಷ್ಯವನ್ನು ಸಂಪೂರ್ಣವಾಗಿ ಬದಲಾಯಿಸಲಿವೆ.v</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260520-51-307289279</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>