ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರವಿ ಬಿರಾದಾರ ಅವರು, ‘ವೀಕ್ಷಕರ ಮುಂದೆ ಹೀಗೆಲ್ಲ ಏಕೆ ಹೇಳುತ್ತಿದ್ದೀರಿ ಎಂದು ಜೋರು ಮಾಡಿದರು. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಆಗ ರವಿ ಬಿರಾದಾರ, ಮಂಡಲ ಕಾರ್ಯದರ್ಶಿ ರಾಜು ಕೋಟೆ, ಮುಖಂಡರಾದ ಶರಣು ಸಲಗರ, ಸಂಗಮೇಶ ನಾಗನಹಳ್ಳಿ ಮತ್ತು ಶಶಿಧರ ಮಾಕಾ ಸೇರಿ ಕುರ್ಚಿ ಎತ್ತಿಕೊಂಡು ಶಿವಲಿಂಗಪ್ಪ ಅವರ ತಲೆಗೆ ಹೊಡೆದರು. ಅಲ್ಲದೆ ಅವರ ಮೊಬೈಲ್ ಒಡೆದು ಹಾಕಿದರು. ತಕ್ಷಣ ಮಧ್ಯೆ ಪ್ರವೇಶಿಸಿದ ಸ್ಥಳೀಯ ನಾಯಕರು ಎಲ್ಲರನ್ನೂ ಸಮಾಧಾನ ಪಡಿಸಿದರು’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.