ಬೆಂಗಳೂರು: ಪಾಕಿಸ್ತಾನದ ಕಲಾವಿದರಿಗೆ ಭಾರತ ನಿಷೇಧ ಹೇರಿದರೆ ದೇಶ ಬಿಟ್ಟು ಹೋಗುತ್ತೇನೆ ಎಂದು ಶಾರುಖ್ ಖಾನ್ ಹೇಳಿದ್ದಾರೆ ಎಂಬ ಸುದ್ದಿಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.ಆದರೆ ಶಾರುಖ್ ಖಾನ್ ಈ ರೀತಿಯ ಹೇಳಿಕೆ ನೀಡಿಲ್ಲ. ಈ ಬಗ್ಗೆ ಬೂಮ್ ಲೈವ್ ಫ್ಯಾಕ್ಟ್ ಚೆಕ್ ಮಾಡಿದೆ.
पाकिस्तान के कलाकारों का बहिष्कार हुआ तो मे देश छोडुंगा -शाहरुख खान ಎಂದು ಹಿಂದಿಯಲ್ಲಿ ಬರೆದ ಪೋಸ್ಟೊಂದು ಟ್ವಿಟರ್ನಲ್ಲಿ ಶೇರ್ ಆಗಿದ್ದು ಹಲವಾರು ಮಂದಿ ಇದನ್ನು ರೀಟ್ವೀಟ್ ಮಾಡಿದ್ದಾರೆ.
ಫೇಸ್ಬುಕ್ನಲ್ಲಿಯೂ ಹಲವಾರು ಮಂದಿ ಇದನ್ನೇ ಶೇರ್ ಮಾಡಿದ್ದು, ಶಾರುಖ್ ಖಾನ್ ವಿರುದ್ದ ಕಾಮೆಂಟ್ಗಳ ಸುರಿಮಳೆಯಾಗಿದೆ.
ಫ್ಯಾಕ್ಟ್ ಚೆಕ್ ಶಾರುಖ್ ಖಾನ್ ಈ ರೀತಿ ಹೇಳಿದ್ದಾರೆಯೇ ಎಂಬುದರ ಬಗ್ಗೆ ಹುಡುಕಾಡಿದರೆ ಈ ರೀತಿಯ ಹೇಳಿಕೆಯನ್ನು ಎಲ್ಲಿಯೂ ನೀಡಿಲ್ಲ.ಟ್ವಿಟರ್ ನಲ್ಲಿ ಶಾರುಖ್ ಖಾನ್ ಪುಲ್ವಾಮ ದಾಳಿಯಲ್ಲಿ ಮಡಿದ ಯೋಧರ ಕುಟುಂಬಗಳಿಗೆ ಶ್ರದ್ಧಾಂಜಲಿ ಅರ್ಪಿಸಿದ್ದು ಬಿಟ್ಟರೆ ಬೇರೆ ಯಾವ ರೀತಿಯ ಟ್ವೀಟ್ ಕೂಡಾ ಮಾಡಿಲ್ಲ.
Heartfelt condolences to the families of our valiant jawans. May the souls of our countrymen who laid their lives down for us rest in peace. #Pulwama
ಬೂಮ್ ತಂಡ ಎಫ್ಡಬ್ಲ್ಯುಐಸಿಇಯ ಸಲಹಾ ಮಂಡಳಿ ಸದಸ್ಯ ಗಜೇಂದ್ರ ಚೌಹಾಣ್ ಅವರಲ್ಲಿ ಮಾತನಾಡಿಸಿದಾಗ, ಭಾರತದ ಯಾವೊಬ್ಬ ನಟನೂ ಈ ರೀತಿ ಹೇಳಿಕೆ ನೀಡಿಲ್ಲ.ಪಾಕಿಸ್ತಾನ ತಂತ್ರಜ್ಞರು, ಸಂಗೀತಕಾರರು ಮತ್ತು ನಟರ ವಿರುದ್ಧ ನಮ್ಮಚಿತ್ರರಂಗ ಒಗ್ಗಟ್ಟಾಗಿ ನಿಂತಿದೆ ಎಂದಿದ್ದಾರೆ.