<p>ಸೇಡಂ: ತಾಲ್ಲೂಕಿನ ಬಟಗೇರಾ(ಬಿ) ಮತ್ತು ಬಟಗೇರಾ(ಕೆ) ಗ್ರಾಮದ ಮಧ್ಯದ ಕಮಲಾವತಿ ನದಿ ಸೇತುವೆ ನೀರಲ್ಲಿ ಮೊಸಳೆ ಬಂದಿದೆ ಎಂದು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಆತಂಕ ಸೃಷ್ಟಿಸಿದ ಘಟನೆ ಭಾನುವಾರ ನಡೆದಿದೆ.</p>.<p>ಸಾಮಾಜಿಕ ಜಾಲತಾಣದಲ್ಲಿ ನೂತನವಾಗಿ ನಿರ್ಮಾಣಗೊಂಡ ಸೇತುವೆಯ ಚಿತ್ರ ಹಾಗೂ ನೀರಲ್ಲಿ ಮೊಸಳೆ ಹರಿದಾಡುತ್ತಿರುವ ಚಿತ್ರವನ್ನು ಜೋಡಿಸಿದ ಕಿಡಿಗೇಡಿಗಳು ಬಟಗೇರಾ ಕಮಲಾವತಿ ನದಿ ನೀರಲ್ಲಿ ಮೊಸಳೆ ಬಂದಿವೆ ಎಂದು ಹರಿಬಿಟ್ಟಿದ್ದಾರೆ.</p>.<p>ಮೊದಲು ಒಂದು ಮೊಸಳೆ, ಕೆಲವು ನಿಮಿಷಗಳ ನಂತರ ಎರಡು ಮೊಸಳೆಗಳ ಚಿತ್ರವನ್ನು ಹರಿಬಿಟ್ಟಿದ್ದಾರೆ. ಇದರಿಂದ ಆತಂಕಗೊಂಡಿದ್ದ ಜನರು ಭಾನುವಾರ ಸಂಜೆ ಸೇಡಂ ನಗರಸಭೆಯ ಅಧಿಕಾರಿಗಳಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.</p>.<p>ನಗರಸಭೆಯ ಅಧಿಕಾರಿಗಳು ಬಟಗೇರಾ ಗ್ರಾಮಕ್ಕೆ ತೆರಳಿ ಜನರಲ್ಲಿ ಮೊಸಳೆ ಇರುವುದನ್ನು ಪತ್ತೆ ಹಚ್ಚಲಾಗುವುದು. ನದಿ ನೀರಿನತ್ತ ಯಾರು ತೆರಳಬಾರದು. ಪ್ರಾಣಿಗಳು ತೆರಳದಂತೆ ಜಾಗೃತೆ ವಹಿಸಬೇಕು ಎಂದು ಮನವಿ ಮಾಡಿದ್ದು, ಈ ಕುರಿತು ಅಧಿಕಾರಿಗಳ ಗಮನಕ್ಕೆ ತರವುದಾಗಿಯೂ ತಿಳಿಸಿದರು.</p>.<p>ನಂತರ ಅವರು ಅಲ್ಲಿಂದ ಮರಳುತ್ತಿರುವಾಗ ಎಡಿಟ್ ಮಾಡಿದ ಸಿಂಹ ನೀರು ಕುಡಿಯುತ್ತಿರುವ ಹಾಗೂ ಪಕ್ಕದಲ್ಲಿ ಮೊಸಳೆ ಇರುವ ಫೋಟೊ ಹರಿಬಿಟ್ಟ ನಂತರ ಇದು ನಕಲಿ ಮೊಸಳೆ ಚಿತ್ರವಿರುವುದಾಗಿ ತಿಳಿದು ಬಂದಿದೆ.</p>.<p>ಈ ಸಂದರ್ಭದಲ್ಲಿ ಬಟಗೇರಾ ಗ್ರಾಮಕ್ಕೆ ನಗರ ಸಭೆ ನೋಡಲ್ ಎಂಜಿನಿಯರ್ ಶ್ರೀಕಾಂತ ಹೊಸಳ್ಳಿ, ದ್ವಿತೀಯ ದರ್ಜೆ ಸಹಾಯಕ ಕುಪ್ಪಣ್ಣ, ಆರೋಗ್ಯ ನಿರೀಕ್ಷಕ ಬಸವರಾಜ ಅವಂಟಿ, ಬಸರೆಡ್ಡಿ, ಸುನೀಲ, ನೂರಂದಯ್ಯಸ್ವಾಮಿ, ಕಾಸಿಂ ಹಾಗೂ ಇತರರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260519-31-1239173821</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸೇಡಂ: ತಾಲ್ಲೂಕಿನ ಬಟಗೇರಾ(ಬಿ) ಮತ್ತು ಬಟಗೇರಾ(ಕೆ) ಗ್ರಾಮದ ಮಧ್ಯದ ಕಮಲಾವತಿ ನದಿ ಸೇತುವೆ ನೀರಲ್ಲಿ ಮೊಸಳೆ ಬಂದಿದೆ ಎಂದು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಆತಂಕ ಸೃಷ್ಟಿಸಿದ ಘಟನೆ ಭಾನುವಾರ ನಡೆದಿದೆ.</p>.<p>ಸಾಮಾಜಿಕ ಜಾಲತಾಣದಲ್ಲಿ ನೂತನವಾಗಿ ನಿರ್ಮಾಣಗೊಂಡ ಸೇತುವೆಯ ಚಿತ್ರ ಹಾಗೂ ನೀರಲ್ಲಿ ಮೊಸಳೆ ಹರಿದಾಡುತ್ತಿರುವ ಚಿತ್ರವನ್ನು ಜೋಡಿಸಿದ ಕಿಡಿಗೇಡಿಗಳು ಬಟಗೇರಾ ಕಮಲಾವತಿ ನದಿ ನೀರಲ್ಲಿ ಮೊಸಳೆ ಬಂದಿವೆ ಎಂದು ಹರಿಬಿಟ್ಟಿದ್ದಾರೆ.</p>.<p>ಮೊದಲು ಒಂದು ಮೊಸಳೆ, ಕೆಲವು ನಿಮಿಷಗಳ ನಂತರ ಎರಡು ಮೊಸಳೆಗಳ ಚಿತ್ರವನ್ನು ಹರಿಬಿಟ್ಟಿದ್ದಾರೆ. ಇದರಿಂದ ಆತಂಕಗೊಂಡಿದ್ದ ಜನರು ಭಾನುವಾರ ಸಂಜೆ ಸೇಡಂ ನಗರಸಭೆಯ ಅಧಿಕಾರಿಗಳಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.</p>.<p>ನಗರಸಭೆಯ ಅಧಿಕಾರಿಗಳು ಬಟಗೇರಾ ಗ್ರಾಮಕ್ಕೆ ತೆರಳಿ ಜನರಲ್ಲಿ ಮೊಸಳೆ ಇರುವುದನ್ನು ಪತ್ತೆ ಹಚ್ಚಲಾಗುವುದು. ನದಿ ನೀರಿನತ್ತ ಯಾರು ತೆರಳಬಾರದು. ಪ್ರಾಣಿಗಳು ತೆರಳದಂತೆ ಜಾಗೃತೆ ವಹಿಸಬೇಕು ಎಂದು ಮನವಿ ಮಾಡಿದ್ದು, ಈ ಕುರಿತು ಅಧಿಕಾರಿಗಳ ಗಮನಕ್ಕೆ ತರವುದಾಗಿಯೂ ತಿಳಿಸಿದರು.</p>.<p>ನಂತರ ಅವರು ಅಲ್ಲಿಂದ ಮರಳುತ್ತಿರುವಾಗ ಎಡಿಟ್ ಮಾಡಿದ ಸಿಂಹ ನೀರು ಕುಡಿಯುತ್ತಿರುವ ಹಾಗೂ ಪಕ್ಕದಲ್ಲಿ ಮೊಸಳೆ ಇರುವ ಫೋಟೊ ಹರಿಬಿಟ್ಟ ನಂತರ ಇದು ನಕಲಿ ಮೊಸಳೆ ಚಿತ್ರವಿರುವುದಾಗಿ ತಿಳಿದು ಬಂದಿದೆ.</p>.<p>ಈ ಸಂದರ್ಭದಲ್ಲಿ ಬಟಗೇರಾ ಗ್ರಾಮಕ್ಕೆ ನಗರ ಸಭೆ ನೋಡಲ್ ಎಂಜಿನಿಯರ್ ಶ್ರೀಕಾಂತ ಹೊಸಳ್ಳಿ, ದ್ವಿತೀಯ ದರ್ಜೆ ಸಹಾಯಕ ಕುಪ್ಪಣ್ಣ, ಆರೋಗ್ಯ ನಿರೀಕ್ಷಕ ಬಸವರಾಜ ಅವಂಟಿ, ಬಸರೆಡ್ಡಿ, ಸುನೀಲ, ನೂರಂದಯ್ಯಸ್ವಾಮಿ, ಕಾಸಿಂ ಹಾಗೂ ಇತರರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260519-31-1239173821</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>