ಎಸ್ಡಿಒ ವೇದ್ ಪಾಲ್ ಗುತ್ತಿಗೆದಾರ ದಿಗ್ವಿಜಯ್ಸಿಂಗ್ ಲಂಚ ಕೇಳಿದ ಆರೋಪ ಮಾಡಿದ್ದರು. ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಸಚಿವ ವಿಜ್, ವೇದ್ ಪಾಲ್ ಬಂಧನಕ್ಕೆ ಆದೇಶಿಸಿದರು. ತನ್ನ ವಿರುದ್ಧದ ಆರೋಪ ನಿರಾಕರಿಸಿ, ಕೆಲವು ದಾಖಲೆ ಗಳನ್ನು ಹಾಜರುಪಡಿಸಲು ಮುಂದಾದ ವೇದ್ ಪಾಲ್ ವಿರುದ್ಧ ಸಚಿವ ಹರಿಹಾಯ್ದರು. ಆಗ, ಸಚಿವ ವಿಜ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ವೇದ್ ಪಾಲ್, ‘ಔರಂಗಜೇಬ್ನ ಆಡಳಿತದಂತೆ ಈಗಿನ ಸ್ಥಿತಿ ಇದೆ. ಅವರ ಆಳ್ವಿಕೆ ಇದಕ್ಕಿಂತಲೂ ಉತ್ತಮವಾಗಿತ್ತು’ ಎಂದು ಗೊಣಗಿದರು. ಈ ಮಾತಿಗೆ ಮತ್ತಷ್ಟೂ ವ್ಯಗ್ರರಾದ ಸಚಿವ ವಿಜ್, ‘ಆತನನ್ನು ಹೊರ ಹಾಕಿ’ ಎಂದು ಭದ್ರತಾ ಅಧಿಕಾರಿಗಳಿಗೆ ಸೂಚಿಸಿದರು.