ನವದೆಹಲಿ: ಅಂಚೆ ಕಚೇರಿಯಲ್ಲಿ ಮತ್ತು ಅಂಚೆ ಕಚೇರಿ ಪೇಮೆಂಟ್ಸ್ ಬ್ಯಾಂಕ್ನಲ್ಲಿ ಖಾತೆ ಹೊಂದಿರುವವರು ಇನ್ನು ಮುಂದೆ ಬ್ಯಾಂಕಿಂಗ್ ಸೇವೆಗಳನ್ನು ‘ಡಾಕ್ಪೇ’ ಹೆಸರಿನ ಆ್ಯಪ್ ಮೂಲಕ ಪಡೆಯಬಹುದು. ಈ ಆ್ಯಪ್ಗೆ ಕೇಂದ್ರ ಐ.ಟಿ. ಸಚಿವ ರವಿಶಂಕರ್ ಪ್ರಸಾದ್ ಮಂಗಳವಾರ ಚಾಲನೆ ನೀಡಿದ್ದಾರೆ.
ಹಣ ಕಳುಹಿಸುವ, ಕ್ಯೂಆರ್ ಕೋಡ್ ಬಳಸಿ ಹಣ ಪಾವತಿಸುವ ಸೇವೆಗಳನ್ನು ಈ ಆ್ಯಪ್ ಮೂಲಕ ಪಡೆಯಬಹುದು. ‘ಇದು ಅಂಚೆ ಕಚೇರಿಯ ಬ್ಯಾಂಕಿಂಗ್ ಸೇವೆಗಳನ್ನು ಹಾಗೂ ಅಂಚೆ ಕಚೇರಿಯ ಉತ್ಪನ್ನಗಳನ್ನು ಆನ್ಲೈನ್ ಮೂಲಕ ಒದಗಿಸುತ್ತದೆ’ ಎಂದು ಸಚಿವ ಪ್ರಸಾದ್ ಹೇಳಿದರು.