ಕೊಪ್ಪಳ: ವಿಧಾನಸಭೆ ಸಾರ್ವತ್ರಿಕ ಚುನಾವಣೆ ನಿಮಿತ್ತ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದ್ದು, ಅಕ್ರಮಗಳನ್ನು ಪತ್ತೆ ಹಚ್ಚಲು ಜಿಲ್ಲೆಯಾದ್ಯಂತ ಚೆಕ್ಪೋಸ್ಟ್ ಗಳನ್ನು ಸ್ಥಾಪಿಸಿ, ಸ್ಥಿರ ಕಣ್ಗಾವಲು ತಂಡವನ್ನು ನಿಯೋಜಿಸಲಾಗಿದೆ.ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಸೋಮವಾರ ಯಲಬುರ್ಗಾ ತಾಲ್ಲೂಕಿನ ಸಂಕನೂರ ಗ್ರಾಮ ಬಳಿಯ ಚೆಕ್ಪೋಸ್ಟ್ಗೆ ಆಕಸ್ಮಿಕ ಭೇಟಿ ನೀಡಿ, ಕಾರ್ಯತಂಡದ ಕಾರ್ಯವೈಖರಿಯನ್ನು ಖುದ್ದು ಪರಿಶೀಲಿಸಿದರು.ಅಲ್ಲಿನ ಚೆಕ್ಪೋಸ್ಟ್ ಗೆ ಆಕಸ್ಮಿಕ ಭೇಟಿ ನೀಡಿದ ಜಿಲ್ಲಾಧಿಕಾರಿ, ಚೆಕ್ಪೋಸ್ಟ್ ಮೂಲಕ ಸಂಚರಿಸುವ ಲಾರಿ, ಕಾರು, ಟಾಟಾ ಏಸ್ ಸೇರಿದಂತೆ ಎಲ್ಲ ಬಗೆಯ ವಾಹನಗಳ ತಪಾಸಣೆ ಮಾಡಿಸಿದರು.