‘ಒಳ್ಳೆಯವರಿಗೇ ಯಾಕೆ ಹೀಗೆ ಆಗುತ್ತದೆ? ವಿಜಯ್ ನಿಮ್ಮ ಜೀವನ ಪಯಣವನ್ನು ನನ್ನ ಯೂಟ್ಯೂಬ್ ಕಾರ್ಯಕ್ರಮದಲ್ಲಿ ಹಂಚಿಕೊಳ್ಳಲು ಬಂದಾಗ ಖಂಡಿತವಾಗಿಯೂ ಇಂಥ ನೋವಿನ ತಿರುವು ಊಹಿಸಿರಲಿಲ್ಲ. ತುಂಬಾ ಕಷ್ಟಪಟ್ಟು, ಸ್ವಾಭಿಮಾನದಿಂದ, ಬೆಳೆದು ನಿಂತು, ಕನ್ನಡಕ್ಕೆ ರಾಷ್ಟಪ್ರಶಸ್ತಿ ತಂದುಕೊಟ್ಟು, ಇಂದು ವಿದಾಯ ಹೇಳಿದ್ದೀರಾ... ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ನಿಮ್ಮ ಕುಟುಂಬಕ್ಕೆ ಈ ದುಃಖ ಸಹಿಸುವ ಶಕ್ತಿ ಆ ಭಗವಂತ ಕೊಡಲಿ’ ಎಂದು ಅನುಶ್ರೀ ಸಂದೇಶ ಪ್ರಕಟಿಸಿದ್ದಾರೆ.