<p><strong>ನಾಗಪುರ:</strong> ಇಲ್ಲಿನ ಕೊರಾಡಿಯಲ್ಲಿ ಹೋಳಿ ಹಬ್ಬದ ಸಂಭ್ರಮದಲ್ಲಿದ್ದ 4 ವರ್ಷದ ಪುಟ್ಟ ಬಾಲಕನೊಬ್ಬ ಆಟವಾಡುತ್ತಾ 60 ವರ್ಷದ ಮಹಿಳೆ ಹಾಗೂ ಆತನ ದೂರದ ಸಂಬಂಧಿಗೆ ಬಣ್ಣ ಎರಚುತ್ತಾನೆ. ಕೋಪಗೊಂಡ ಮಹಿಳೆ ತಕ್ಷಣ ಆತನ ಮೇಲೆ ಕೈಯಲ್ಲಿದ್ದ ಬಿಸಿ ನೀರನ್ನು ಎರಚಿ ಕ್ರೌರ್ಯ ಮೆರೆದಿದ್ದಾರೆ. </p><p>ಘಟನೆಯಲ್ಲಿ 4 ವರ್ಷದ ಓಂ ವಾಂಗೆ ಎಂಬ ಬಾಲಕನ ದೇಹವು ಶೇ 18ರಿಂದ 20ರಷ್ಟು ಸುಟ್ಟು ಗಾಯಗೊಂಡು, ನಾಗಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಬಾಲಕನ ಮೇಲೆ ಕುದಿಯುವ ನೀರು ಎರಚಿದ ಮಹಿಳೆ ಹೆಸರು ಬಾಲಕನ ದೂರದ ಸಂಬಂಧಿ ಸಿಂಧು ಠಾಕ್ರೆ ಎಂದು ತಿಳಿದುಬಂದಿದೆ. </p><p>ಹಲ್ಲೆಗೆ ಒಳಗಾಗಿರುವ ಬಾಲಕ ಓಂ ವಾಂಗೆ ಶಿಕ್ಷಣಕ್ಕಾಗಿ, ಕೊರಾಡಿಯಲ್ಲಿರುವ ತನ್ನ ತಾಯಿಯ ಚಿಕ್ಕಪ್ಪ ಮತ್ತು ಅಜ್ಜಿಯೊಂದಿಗೆ ವಾಸಿಸುತ್ತಿದ್ದಾನೆ. ಬಾಲಕನ ಪೋಷಕರು ಖಾಪರ್ಖೇಡಾದ ಚಂಕಪುರದಲ್ಲಿ ವಾಸಿಸುತ್ತಿದ್ದಾರೆ. </p>.<p>ಬಾಲಕನ ಮೇಲೆ ಕುದಿಯುವ ನೀರು ಎರಚಿದ ಆರೋಪಿ ಸಿಂಧು ಠಾಕ್ರೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ನಾಗಪುರ ಡಿಸಿಪಿ ಸಂದೀಪ್ ಪಖಾಲೆ ತಿಳಿಸಿದ್ದಾರೆ. </p><p>‘ಮೇಲ್ನೋಟಕ್ಕೆ ಇದೊಂದು ಹಠಾತ್ ಪ್ರತಿರೋದನೆಯ ಪ್ರಕರಣದಂತೆ ಕಂಡು ಬಂದಿದೆ. ಬಾಲಕ ಬಣ್ಣ ನೀರು ಎರಚುತ್ತಿದ್ದಂತೆ ಕೋಪಗೊಂಡ ಮಹಿಳೆ ಆ ರೀತಿ ಪ್ರತಿಕ್ರಿಯಿಸಿದ್ದಾರೆ. ಇದು ಪೂರ್ವನಿಯೋಜಿತ ಕೃತ್ಯವಲ್ಲ. ಆದರೆ, ಇದೊಂದು ಬೇಜವಾಬ್ದಾರಿ ಕೃತ್ಯವಾಗಿದೆ. ಮಗುವನ್ನು ಅಪಾಯಕ್ಕೆ ದೂಡಿರುವ ಮಹಿಳೆ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಸಂದೀಪ್ ಪಖಾಲೆ ಹೇಳಿದ್ದಾರೆ.</p><p>ಉದ್ದೇಶಪೂರ್ವಕವಾಗಿ ಯಾವುದೇ ವ್ಯಕ್ತಿಯನ್ನು ಗಂಭೀರ ಗಾಯಗೊಳಿಸಿದರೆ, ಅಂತಹ ವ್ಯಕ್ತಿಯ ವಿರುದ್ಧ ಭಾರತ ನ್ಯಾಯ ಸಂಹಿತೆ ಸೆಕ್ಷನ್ 117 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು. ಈ ಕಾಯ್ದೆಯ ಅನ್ವಯ ಆರೋಪಿಗೆ 7 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ. ಆದರೆ, ಮಹಿಳೆಯ ವಯಸ್ಸು ಪರಿಗಣಿಸಿ, ನಾವು ಇನ್ನೂ ಅಕೆಯನ್ನು ಬಂಧಿಸಿಲ್ಲ’ ಎಂದು ಕೊರಾಡಿ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಗಪುರ:</strong> ಇಲ್ಲಿನ ಕೊರಾಡಿಯಲ್ಲಿ ಹೋಳಿ ಹಬ್ಬದ ಸಂಭ್ರಮದಲ್ಲಿದ್ದ 4 ವರ್ಷದ ಪುಟ್ಟ ಬಾಲಕನೊಬ್ಬ ಆಟವಾಡುತ್ತಾ 60 ವರ್ಷದ ಮಹಿಳೆ ಹಾಗೂ ಆತನ ದೂರದ ಸಂಬಂಧಿಗೆ ಬಣ್ಣ ಎರಚುತ್ತಾನೆ. ಕೋಪಗೊಂಡ ಮಹಿಳೆ ತಕ್ಷಣ ಆತನ ಮೇಲೆ ಕೈಯಲ್ಲಿದ್ದ ಬಿಸಿ ನೀರನ್ನು ಎರಚಿ ಕ್ರೌರ್ಯ ಮೆರೆದಿದ್ದಾರೆ. </p><p>ಘಟನೆಯಲ್ಲಿ 4 ವರ್ಷದ ಓಂ ವಾಂಗೆ ಎಂಬ ಬಾಲಕನ ದೇಹವು ಶೇ 18ರಿಂದ 20ರಷ್ಟು ಸುಟ್ಟು ಗಾಯಗೊಂಡು, ನಾಗಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಬಾಲಕನ ಮೇಲೆ ಕುದಿಯುವ ನೀರು ಎರಚಿದ ಮಹಿಳೆ ಹೆಸರು ಬಾಲಕನ ದೂರದ ಸಂಬಂಧಿ ಸಿಂಧು ಠಾಕ್ರೆ ಎಂದು ತಿಳಿದುಬಂದಿದೆ. </p><p>ಹಲ್ಲೆಗೆ ಒಳಗಾಗಿರುವ ಬಾಲಕ ಓಂ ವಾಂಗೆ ಶಿಕ್ಷಣಕ್ಕಾಗಿ, ಕೊರಾಡಿಯಲ್ಲಿರುವ ತನ್ನ ತಾಯಿಯ ಚಿಕ್ಕಪ್ಪ ಮತ್ತು ಅಜ್ಜಿಯೊಂದಿಗೆ ವಾಸಿಸುತ್ತಿದ್ದಾನೆ. ಬಾಲಕನ ಪೋಷಕರು ಖಾಪರ್ಖೇಡಾದ ಚಂಕಪುರದಲ್ಲಿ ವಾಸಿಸುತ್ತಿದ್ದಾರೆ. </p>.<p>ಬಾಲಕನ ಮೇಲೆ ಕುದಿಯುವ ನೀರು ಎರಚಿದ ಆರೋಪಿ ಸಿಂಧು ಠಾಕ್ರೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ನಾಗಪುರ ಡಿಸಿಪಿ ಸಂದೀಪ್ ಪಖಾಲೆ ತಿಳಿಸಿದ್ದಾರೆ. </p><p>‘ಮೇಲ್ನೋಟಕ್ಕೆ ಇದೊಂದು ಹಠಾತ್ ಪ್ರತಿರೋದನೆಯ ಪ್ರಕರಣದಂತೆ ಕಂಡು ಬಂದಿದೆ. ಬಾಲಕ ಬಣ್ಣ ನೀರು ಎರಚುತ್ತಿದ್ದಂತೆ ಕೋಪಗೊಂಡ ಮಹಿಳೆ ಆ ರೀತಿ ಪ್ರತಿಕ್ರಿಯಿಸಿದ್ದಾರೆ. ಇದು ಪೂರ್ವನಿಯೋಜಿತ ಕೃತ್ಯವಲ್ಲ. ಆದರೆ, ಇದೊಂದು ಬೇಜವಾಬ್ದಾರಿ ಕೃತ್ಯವಾಗಿದೆ. ಮಗುವನ್ನು ಅಪಾಯಕ್ಕೆ ದೂಡಿರುವ ಮಹಿಳೆ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಸಂದೀಪ್ ಪಖಾಲೆ ಹೇಳಿದ್ದಾರೆ.</p><p>ಉದ್ದೇಶಪೂರ್ವಕವಾಗಿ ಯಾವುದೇ ವ್ಯಕ್ತಿಯನ್ನು ಗಂಭೀರ ಗಾಯಗೊಳಿಸಿದರೆ, ಅಂತಹ ವ್ಯಕ್ತಿಯ ವಿರುದ್ಧ ಭಾರತ ನ್ಯಾಯ ಸಂಹಿತೆ ಸೆಕ್ಷನ್ 117 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು. ಈ ಕಾಯ್ದೆಯ ಅನ್ವಯ ಆರೋಪಿಗೆ 7 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ. ಆದರೆ, ಮಹಿಳೆಯ ವಯಸ್ಸು ಪರಿಗಣಿಸಿ, ನಾವು ಇನ್ನೂ ಅಕೆಯನ್ನು ಬಂಧಿಸಿಲ್ಲ’ ಎಂದು ಕೊರಾಡಿ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>