ದಾವಣಗೆರೆ ಜಿಲ್ಲೆ ಹೊನ್ನಾಳ್ಳಿ ತಾಲ್ಲೂಕಿನ ಪಂಚಾಕ್ಷರಯ್ಯ ತಮ್ಮ ಹತ್ತುಗುಂಟೆ ವಿಸ್ತೀರ್ಣದ ಹೊಲದಲ್ಲಿ ಹತ್ತಾರು ಬೆಳೆ ಬೆಳೆದು ಇಂದು 6 ಲಕ್ಷಕ್ಕೂ ಹೆಚ್ಚು ಆದಾಯ ಗಳಿಸುತ್ತಿದ್ದಾರೆ. ಬೇರೆ ಬೇರೆ ತೋಟಕ್ಕೆ ಭೇಟಿ ನೀಡಿ ಕೃಷಿ ಹಾಗೂ ಬೆಳೆ ಬಗ್ಗೆ ತಿಳಿದುಕೊಂಡು ಅದನ್ನು ತಮ್ಮ ತೋಟದಲ್ಲಿ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ.