ಭತ್ತದ ಕಣಜ ಎನಿಸಿರುವ ಕೊಪ್ಪಳ ಜಿಲ್ಲೆ ರಜತ ಮಹೋತ್ಸವದ ಸಂಭ್ರಮದಲ್ಲಿದೆ. ಕೃಷಿ ಪ್ರಧಾನ ಜಿಲ್ಲೆ ಎಂಬ ಪಟ್ಟದಿಂದ ತೋಟಗಾರಿಕೆ ಮಹತ್ವದ ಊರಾಗಿ, ಕೈಗಾರಿಕಾ ಪ್ರಧಾನ ಜಿಲ್ಲೆಯಾಗಿ ಮಾರ್ಪಟ್ಟಿದೆ. ಭಾನಾಪುರ ಸಮೀಪದ 435 ಎಕರೆ ಜಾಗದಲ್ಲಿ ಆಟಿಕೆ ಅಂದ್ರೆ, ಟಾಯ್ಸ್ ಕ್ಲಸ್ಟರ್ ನಿರ್ಮಾಣವಾಗುತ್ತಿದ್ದು, ಇದು ಏಷ್ಯಾದಲ್ಲಿಯೇ ಅತಿ ದೊಡ್ಡದು ಎನ್ನುವುದು ಜಿಲ್ಲೆಗೆ ಹೆಗ್ಗಳಿಕೆ.