ಆಲಮಟ್ಟಿ ಅಣೆಕಟ್ಟೆಯ ಎತ್ತರ ಹೆಚ್ಚಳದ ವೇಳೆ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾದ ಜಮೀನನ್ನು ಸರ್ಕಾರ ರೈತರಿಂದ ಸ್ವಾಧೀನಪಡಿಸಿಕೊಂಡಿತ್ತು. ಭೂಮಿಗೆ ಬದಲಾಗಿ ಪರಿಹಾರ ಪಡೆದ ರೈತರು ಬೇರೆ ಊರುಗಳಿಗೆ ತೆರಳಿ ನೆಲೆಕಂಡುಕೊಂಡಿದ್ದರು. ಆದರೆ ಆನಂತರ ರೈತರು ಅನುಭವಿಸಿದ ವೇದನೆಯನ್ನು ಸಾರುವ ಜಾನಪದ ಶೈಲಿಯ ಹಾಡೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.