ಸಮಾಜದಲ್ಲಿ ನಡೆಯುವ ಶೋಷಣೆಗಳ ಬಗ್ಗೆ ಎಷ್ಟು ಬರೆದರೂ, ಹೇಳಿದರೂ ಮುಗಿಯುವುದಿಲ್ಲ. ಅದರಲ್ಲೂ ಹಳ್ಳಿಪ್ರದೇಶಗಳಲ್ಲಿ ಪಂಚಾಯ್ತಿ ಮಾಡಿ ನೀಡುವ ವಿಚಿತ್ರ ನಿರ್ಣಯಗಳು ಇಂತಹ ಶೋಷಣೆಗಳಿಗೆ ಉತ್ತಮ ಉದಾಹರಣೆ. ಇಂತಹುದೇ ಒಂದು ಅಮಾನವೀಯ ಘಟನೆಯ ಬಗ್ಗೆ ‘ಪ್ರಜಾವಾಣಿ' ಕಾರ್ಯನಿರ್ವಾಹಕ ಸಂಪಾದಕ, ರವೀಂದ್ರ ಭಟ್ಟ ಅವರು ಇಲ್ಲಿ ವಿವರಿಸಿದ್ದಾರೆ.