ಮುಳುಗಡೆ ನಗರಿ ಎಂದೇ ಕರೆಯಲಾಗುವ ಬಾಗಲಕೋಟೆಗೆ ಈಗ ರಜತ ಮಹೋತ್ಸವದ ಸಂಭ್ರಮ. ಮುಳುಗಡೆಯಿಂದ ‘ನವ ನಗರ’ವಾಗುವತ್ತ ದಿಟ್ಟ ಹೆಜ್ಜೆ ಇಡುತ್ತಿದೆ ಈ ಜಿಲ್ಲೆ. ಮುಳುಗಡೆ ಸಂತ್ರಸ್ತರಿಗಾಗಿ ನಿರ್ಮಿಸಿರುವ ಬಾಗಲಕೋಟೆಯ ‘ನವನಗರ’ ಮಾದರಿಯಾಗಿದೆ. ಚಂಡೀಗಢ ಮಾದರಿಯಲ್ಲಿ ಈ ನವನಗರವನ್ನು ನಿರ್ಮಿಸಲಾಗಿದೆ. ಪ್ರವಾಸೋದ್ಯಮ ದೃಷ್ಟಿಯಿಂದಲೂ ಮಹತ್ವ ಹೊಂದಿರುವ ಜಿಲ್ಲೆ ಇದು.