ಮಹಾರಾಷ್ಟ್ರ ಹಾಗೂ ಬೆಳಗಾವಿ ಜಿಲ್ಲೆಗಳ ಜಲಾನಯನ ಪ್ರದೇಶದಲ್ಲಿ ಕುಂಭದ್ರೋಣ ಮಳೆ ನಿಂತು 40 ಗಂಟೆ ಕಳೆದ ನಂತರವೂ ಬಾಗಲಕೋಟೆ ಜಿಲ್ಲೆಯಲ್ಲಿ ಕೃಷ್ಣಾ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳು ಆರ್ಭಟಿಸುತ್ತಿವೆ.
ನದಿ ತೀರದ ಗ್ರಾಮಗಳಲ್ಲಿ ಈಗ ಪ್ರವಾಹದ ನೀರು ಆವರಿಸಿದ್ದು, ನೆತ್ತಿಯ ಮೇಲೆ ಸೂರ್ಯನ ಬಿಸಿಲು ಪ್ರಖರವಾಗಿದ್ದರೂ ಎದೆ ಎತ್ತರ ಆವರಿಸಿರುವ ನೀರ ರಾಶಿಯನ್ನು ದಾಟಿಕೊಂಡು ಹಳ್ಳಿಗರು ಸುರಕ್ಷಿತ ಸ್ಥಳಗಳತ್ತ ತೆರಳುವುದನ್ನು ಕಾಣಬಹುದು.