ಇದು ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ದೂಪತಮಹಾಗಾಂವ ಗ್ರಾಮಸ್ಥರ ಇಚ್ಛಾಶಕ್ತಿಯ ಕಥೆ. ಗ್ರಾಮಸ್ಥರ ಪರಿಶ್ರಮದಿಂದಾಗಿ ಹೂಳು ತುಂಬಿ ಬತ್ತಿ ಹೋಗಿದ್ದ ಕೆರೆಗೆ ಈಗ ಮರುಜೀವ ಬಂದಿದೆ. ಈಗ ಕೆರೆಯಲ್ಲಿ ನೀರು ಸಂಗ್ರಹವಾಗಿದ್ದು, ಅಂತರ್ಜಲಮಟ್ಟವೂ ಹೆಚ್ಚಾಗಿದೆ. ಇದರಿಂದ ಗ್ರಾಮದಲ್ಲಿ ಹಲವು ವರ್ಷಗಳಿಂದ ಇದ್ದ ನೀರಿನ ಸಮಸ್ಯೆಯೂ ನೀಗಿದೆ.