ಗಡಿ ಜಿಲ್ಲೆ ಚಾಮರಾಜನಗರಕ್ಕೆ ಹೊಂದಿಕೊಂಡಿರುವ ತಮಿಳುನಾಡಿನ ತಾಳವಾಡಿ ಕೋಮುಸಾಮರಸ್ಯದ ತಾಣ. ಕನ್ನಡಿಗರೇ ಹೆಚ್ಚಿನ ಸಂಖ್ಯೆಯಲ್ಲಿರುವ ಇಲ್ಲಿ ಮಾರಮ್ಮ ದೇವಾಲಯ, ಮಸೀದಿ ಹಾಗೂ ವೇಣುಗೋಪಾಲ ದೇವಾಲಯ ಅಕ್ಕಪಕ್ಕದಲ್ಲಿದ್ದು, ಹಿಂದೂಗಳು, ಮುಸ್ಲಿಮರು ಭಾವೈಕ್ಯತೆಯಿಂದ ಬಾಳುತ್ತಿದ್ದಾರೆ. ಪ್ರತಿ ವರ್ಷ ನಡೆಯುವ ಮಾರಮ್ಮನ ಕೊಂಡೋತ್ಸವ ಮಸೀದಿ ಮುಂಭಾಗದಲ್ಲಿ ನಡೆಯುತ್ತದೆ. ಮುಸ್ಲಿಮರು ಇದರಲ್ಲಿ ಭಾಗವಹಿಸುತ್ತಾರೆ.