ವಿಘ್ನವಿನಾಶಕ ಗಣೇಶನ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ಮಂಗಳೂರು ನಗರದಲ್ಲಿ 90 ವರ್ಷಗಳಿಂದ ನಿರಂತರವಾಗಿ ಪರಿಸರ ಸ್ನೇಹಿ ಗಣೇಶನ ವಿಗ್ರಹ ತಯಾರಿಸುವ ಕಾಯಕದಲ್ಲಿ ಕುಟುಂಬವೊಂದು ನಿರತವಾಗಿದೆ. ಮಣ್ಣಗುಡ್ಡೆಯ ‘ಶ್ರೀ ಗಣೇಶ್’ನ ಎಂ.ಮೋಹನ್ ರಾವ್ 90 ವರ್ಷಗಳ ಹಿಂದೆ ಗಣಪನ ಮೂರ್ತಿ ತಯಾರಿಕೆ ಆರಂಭಿಸಿದ್ದರು. ನಾಲ್ಕನೇ ತಲೆಮಾರಿನವರಿಗೂ ಈ ಕಾಯಕ ಮುಂದುವರಿದಿದೆ. ಆವೆ ಮಣ್ಣಿನಿಂದ ತಯಾರಾಗುವ ಈ ಮೂರ್ತಿಗಳು ಭಕ್ತಿಯ ಜೊತೆಗೆ, ಪರಿಸರ ಸಂರಕ್ಷಣೆಯ ಪಾಠ ಹೇಳುತ್ತಿವೆ.