ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹಾವೇರಿ ವಿಭಾಗದ ಹಿರೇಕೆರೂರು ಘಟಕದ ಬಸ್ ಕನ್ನಡ ಪ್ರೇಮಿಗಳನ್ನು ವಿಶೇಷವಾಗಿ ಸ್ವಾಗತಿಸುತ್ತಿದೆ. ಇಡೀ ಬಸ್ ಕನ್ನಡ ರಥವಾಗಿ ಪರಿವರ್ತನೆಗೊಂಡಂತಿದೆ. ₹ 35 ಸಾವಿರ ಸ್ವಂತ ಖರ್ಚಿನಿಂದ ಬಸ್ ಅನ್ನು ವಿಶೇಷವಾಗಿ ಅಲಂಕರಿಸಿದ್ದಾರೆ ಹಿರೇಕೆರೂರು ನಿರ್ವಾಹಕ ಶಶಿಕುಮಾರ ಬೋಸ್ಲೆ. ಚಾಲಕ ಹರೀಶ್ ಇದಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಬಸ್ನಲ್ಲಿ ಏನೆಲ್ಲ ವಿಶೇಷವಿದೆ ಎಂಬ ವಿವರ ಈ ವಿಡಿಯೊದಲ್ಲಿ.