ಕೊಪ್ಪಳ ಜಿಲ್ಲೆ ಹನುಮಸಾಗರ ಸಮೀಪದ ವೆಂಕಟಾಪುರ ಗ್ರಾಮದ ಬೆಟ್ಟದ ಮೇಲೆ ಪ್ರತಿದಿನ ನವಿಲುಗಳ ಕಲರವ ಮನೆ ಮಾಡಿರುತ್ತದೆ. ಇದಕ್ಕೆ ಈಗ ನವಿಲು ಬೆಟ್ಟ ಎಂತಲೇ ಹೆಸರು ಬಂದಿದೆ. ನವಿಲುಗಳಿಗೆ ನೀರು ಹಾಗೂ ಆಹಾರದ ವ್ಯವಸ್ಥೆ ಮಾಡಿರುವುದು ವೆಂಕಟಾಪುರ ಗ್ರಾಮದ ಠಾಕೂರ ಮಾನಪ್ಪ, ಪಶುರಾಮ, ಯುವಕ ಕಿಶೋರ ಅವರ ತಂಡ. ಈ ಯುವಕರ ಮಾನವೀಯ ಕಾರ್ಯದಿಂದಾಗಿ ನೀರು, ಧಾನ್ಯ ಅರಸಿ ಬರುವ ನವಿಲುಗಳ ಸಂಖ್ಯೆಯೂ ಹೆಚ್ಚುತ್ತಿದೆ.